ದಕ್ಷಿಣ ವೃತ್ತ ಸಿಪಿಐ ಗುರುಬಸವರಾಜಗೆ ಮುಖ್ಯಮಂತ್ರಿ ಪದಕ

ದಾವಣಗೆರೆ, ಫೆ.11- 2019ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಇಲ್ಲಿನ ದಕ್ಷಿಣ ವೃತ್ತ ಸಿಪಿಐ ಹೆಚ್. ಗುರುಬಸವರಾಜ ಭಾಜನರಾಗಿದ್ದು, ಎಸ್ಪಿ ಹನುಮಂತರಾಯ ಅವರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಇಂದು ಅಭಿನಂದಿಸಿದರು. 

ಇದೇ ದಿನಾಂಕ 8ರಂದು ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಮುಖ್ಯಮಂತ್ರಿ ಪದಕ ಪ್ರಧಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಅವರಿಂದ ಪದಕವನ್ನು ಗುರುಬಸವರಾಜ ಸ್ವೀಕರಿಸಿದ್ದರು.

error: Content is protected !!