ಸಿಟಿ ಸೆಂಟ್ರಲ್ ಡೈರೆಕ್ಟರ್‌ಗೆ ಸನ್ಮಾನ

ದಾವಣಗೆರೆ, ಏ. 14- ಈಚೆಗೆ ನಗರದ ತರಳಬಾಳು ಬಡಾವಣೆ ಅನುಶ್ರೀ ಬಳಗದಿಂದ ಚಿತ್ರ ರಚನೆ ಸಹಿತ  ಗೃಹ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸಿಟಿ ಸೆಂಟ್ರಲ್ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಸುಬ್ಬರಾವ್‌ ಅವರನ್ನು ಸನ್ಮಾನಿಸಲಾಯಿತು. 

ವಿದ್ಯಾರ್ಥಿಗಳ ಸಂಗೀತಕ್ಕೆ  ದತ್ತಾತ್ರೇಯ ಭಟ್, ಸದಾನಂದ ಹೆಗಡೆ ಚಿತ್ರ ರಚನೆ ಮಾಡಿದರು. ಅನುಶ್ರೀ ಬಳಗದ ಮುಖ್ಯಸ್ಥೆ ವೀಣಾ ಹೆಗಡೆ ಹಿನ್ನೆಲೆ ಸಂಗೀತ ನೀಡಿದರು. ನಿವೃತ್ತ ಶಿಕ್ಷಕ ಬಸವರಾಜ ದುರ್ಗದ ಮತ್ತಿತರರು ಉಪಸ್ಥಿತರಿದ್ದರು.

error: Content is protected !!