ಕಾಗಿನೆಲೆ ಕ್ರೆಡಿಟ್ ಕೋ ಆಪ್ ಸೊಸೈಟಿ ಪ್ರಾರಂಭ

ದಾವಣಗೆರೆ, ಏ.9 – ನಗರದ ಪಿ.ಬಿ.ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ‌ ನೂತನವಾಗಿ ಪ್ರಾರಂಭಗೊಂಡ ಶ್ರೀ ಕಾಗಿನೆಲೆ ಕ್ರೆಡಿಟ್ ಕೋ ಆಪ್. ಸೊಸೈಟಿಯನ್ನು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಶುಕ್ರವಾರ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ದಾ-ಹ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕುಮಾರಸ್ವಾಮಿ, ಮಹಾನಗರಪಾಲಿಕೆ ಸದಸ್ಯೆ ಶ್ರೀಮತಿ ಆಶಾ ಉಮೇಶ್, ದಾ-ಹ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎ.ಮುರುಗೇಶ್ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿಯ ಪ್ರವರ್ತಕ ಹಾಗೂ ಯಶಸ್ವಿನಿ ಕ್ರೆ.ಕೋ ಆಪ್.ಸೊಸೈಟಿ ಸಂಸ್ಥಾಪಕ ಬಿ.ರಮೇಶ್ (ಪಿ.ಜೆ.) ವಹಿಸಿದ್ದರು. ಈ ಸಂದರ್ಭದಲ್ಲಿ ಸೊಸೈಟಿ ನಿರ್ದೇಶಕರುಗಳಾದ ಶ್ರೀಮತಿ ಆರತಿ ಕೆ.ಎಸ್., ಶಿವಣ್ಣ ಟಿ.ಎಸ್, ಸಿದ್ದಪ್ಪ ಅಡಾಣಿ,  ಉಮಾಶಂಕರ್, ಕರಿಬಸಪ್ಪ ಅಡಿವೆಪ್ಪ, ಕೆ.ಬಿ.ರಾಜಶೇಖರ್, ಚಂದ್ರಶೇಖರ್ ಎಸ್, ಸಿದ್ದಪ್ಪ ಹುಲಿಕಟ್ಟಿ, ಶ್ರೀಮತಿ ಕೆಂಚಮ್ಮ, ಶ್ರೀಮತಿ ಜಯ್ಯಮ್ಮ, ಶ್ರೀಮತಿ ಕವಿತ, ಕೆ.ತಿರುಮಲ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

error: Content is protected !!