ಪ್ರಾಮಾಣಿಕತೆ ಮೆರೆದ ಆಟೋ ಚಾಲಕ : ಎಸ್ಪಿ ಶ್ಲಾಘನೆ

ದಾವಣಗೆರೆ, ಏ.8- ತಮಗೆ ಸಿಕ್ಕ ಬಂಗಾರ ಮತ್ತು ನಗದುಳ್ಳ ಪರ್ಸ್ ಅನ್ನು ಪೊಲೀಸರಿಗೆ ಒಪ್ಪಿಸಿ, ಅದು ವಾರಸು ದಾರರ ಕೈಗೆ ಸೇರುವಲ್ಲಿ ಆಟೋ ಚಾಲಕ ಆರ್.ಟಿ. ಜಗದೀಶ್ ಪ್ರಾಮಾಣಿಕತೆ ಮೆರೆದಿದ್ದು, ಎಸ್ಪಿ ಹನುಮಂತರಾಯ ಶ್ಲಾಘಿಸಿದ್ದಾರೆ.

ಮಾರ್ಚ್ 25, 2021 ರಂದು ನಗರದ ಪಿ.ಜೆ. ಬಡಾವಣೆಯ 7ನೇ ಮುಖ್ಯ ರಸ್ತೆಯಲ್ಲಿ 15 ಗ್ರಾಂ ತೂಕದ ಬಂಗಾರದ ಒಡವೆ ಹಾಗೂ 2508 ರೂ. ನಗದುಳ್ಳ ಪರ್ಸ್ ನಗರದ ಆಟೋ ಚಾಲಕ ಜಗದೀಶ್‌ಗೆ ಸಿಕ್ಕಿದ್ದು, ಅವುಗಳನ್ನು ಪ್ರಾಮಾಣಿಕತೆಯಿಂದ ಬಡಾವಣೆ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ನಂತರ ಪೊಲೀಸರು ಅದರ ವಾರಸುದಾರರನ್ನು ಪತ್ತೆ ಮಾಡಿ ವಸ್ತುಗಳನ್ನು ಒಪ್ಪಿಸಿದ್ದಾರೆ. 

ಆಟೋ ಚಾಲಕ ಜಗದೀಶ್ ಅವರ ಪ್ರಾಮಾಣಿಕ ಕಾರ್ಯಕ್ಕೆ ಇಂದು ಎಸ್ಪಿ ಹನುಮಂತರಾಯ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಪ್ರಶಂಸನೀಯ ಪತ್ರ ನೀಡಿ ಗೌರವಿಸಿದ್ದಾರೆ.

error: Content is protected !!