ಕಸ ಗುಡಿಸಿದ ನ್ಯಾಯಾಧೀಶರು

ರಾಣೇಬೆನ್ನೂರು, ಫೆ.2- ರಾಷ್ಟ್ರೀಯ ಸ್ವಚ್ಚತಾ ದಿನಾಚರಣೆ ಅಂಗವಾಗಿ ಇಲ್ಲಿನ ನ್ಯಾಯಾಧೀಶರು ನ್ಯಾಯಾಲಯದ ಆವರಣ ಹಾಗೂ ಎದುರಿನ ಹೆದ್ದಾರಿಯಲ್ಲಿ ಕಸಗುಡಿಸಿ ಸ್ವಚ್ಚತಾ ದಿನಾಚರಣೆ ಆಚರಿಸಿದರು.

ನ್ಯಾಯಾಧೀಶರಾದ ಅಣ್ಣುಗೌಡ ಪಾಟೀಲ್, ಜೆ. ಯೋಗೇಶ್, ಜಿ.ವಿ. ಕುಲಕರ್ಣಿ, ಶರವಣನ್, ಪೌರಾಯುಕ್ತ ಡಾ. ಮಹಾಂತೇಶ್, ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಬುರಡಿಕಟ್ಟಿ, ನ್ಯಾಯಾಲಯ ಹಾಗೂ ನಗರಸಭೆ ಸಿಬ್ಬಂದಿ ಭಾಗವಹಿಸಿದ್ದರು.

error: Content is protected !!