ದೂಡಾ ನಿವೃತ್ತ ನೌಕರರಿಗೆ ಬೀಳ್ಕೊಡುಗೆ

ದಾವಣಗೆರೆ, ಏ.4- ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿ ಕಾರದ ನೌಕರರಾದ ಎರಡನೇ ದರ್ಜೆ ಸಹಾಯಕ ಡಿ. ಮಂಜುನಾಥ್‌ ಹಾಗೂ ವರ್ಕ್‌ ಇನ್ಸ್‌ಪೆಕ್ಟರ್‌ ಹೆಚ್‌. ಗುರುಸಿದ್ದಪ್ಪ ವಯೋನಿವೃತ್ತಿ ಹೊಂದಿದ್ದು, ಇವರನ್ನು ಪ್ರಾಧಿಕಾರದ ವತಿಯಿಂದ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ದೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಸದಸ್ಯ ಡಿ.ವಿ. ಜಯರುದ್ರಪ್ಪ, ನಗರ ಯೋಜನಾ ಸದಸ್ಯ ಎಂ. ಅಣ್ಣಪ್ಪ, ಸಹಾಯಕ ನಿರ್ದೇಶಕ ಬಿ. ರೇಣುಕಾಪ್ರಸಾದ್‌, ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಹೆಚ್‌. ಶ್ರೀಕರ ಮತ್ತಿತರರು ಉಪಸ್ಥಿತರಿದ್ದರು.

error: Content is protected !!