ಬನ್ನಿಮಹಾಂಕಾಳಮ್ಮನ ದೇವಸ್ಥಾನದಲ್ಲಿ ಕಾರ್ತಿಕ

ದಾವಣಗೆರೆ, ಜ.13- ಮಹಾನಗರ ಪಾಲಿಕೆಯ 15ನೇ ವಾರ್ಡಿನ  ಕುಂದುವಾಡ ರಸ್ತೆಯ ಜೈನ್‌ ಲೇಔಟ್ ನಲ್ಲಿರುವ ಶ್ರೀ ಬನ್ನಿ ಮಹಾಂಕಾಳಮ್ಮನ ದೇವಸ್ಥಾನದಲ್ಲಿ ಇಂದು ಏರ್ಪಾಡಾಗಿದ್ದ ಕಾರ್ತಿಕ ದೀಪೋತ್ಸವವನ್ನು ಮಾಜಿ  ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. 

ಪಾಲಿಕೆ ಮಾಜಿ ಸದಸ್ಯ ಶಿವನಳ್ಳಿ ರಮೇಶ್, 15ನೇ ವಾರ್ಡಿನ ಪಾಲಿಕೆ ಸದಸ್ಯರಾದ ಶ್ರೀಮತಿ ಆಶಾ ಉಮೇಶ್, ಪಾಲಿಕೆ ಸದಸ್ಯರಾದ ಶ್ರೀಮತಿ ಸವಿತಾ ಗಣೇಶ್, ಸುಧಾ ಮಂಜುನಾಥ್‌, ವಾರ್ಡಿನ ಮುಖಂಡರುಗಳಾದ ಗಾಳೆಯಪ್ಪ, ಉಮೇಶ್ ಲಾಯರ್ ಮಂಜಣ್ಣ, ವೀರಯ್ಯಸ್ವಾಮಿ, ರವಿ, ವಿನಾಯಕ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!