ಬಿ.ವೀರಣ್ಣ ನಿವಾಸಕ್ಕೆ ಜಾರಕಿಹೊಳಿ ಭೇಟಿ

ದಾವಣಗೆರೆ, ಫೆ.13- ಕಾರ್ಯಕ್ರಮವೊಂದರದಲ್ಲಿ ಭಾಗವಹಿಸಲೆಂದು ಇಂದು ನಗರಕ್ಕೆ ಆಗಮಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷರೂ, ಹಿಂದುಳಿದ ವರ್ಗಗಳ ನಾಯಕರೂ ಆದ ಸತೀಶ್ ಜಾರಕಿಹೊಳಿ ಅವರು ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಿ.ವೀರಣ್ಣ ಅವರ ನಿವಾಸಕ್ಕೆ ಸೌಹಾರ್ದ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬಿ. ವೀರಣ್ಣ ಮತ್ತು ನಗರ ಪಾಲಿಕೆ ಮಾಜಿ ಸದಸ್ಯರಾದ ಶ್ರೀಮತಿ ಲಕ್ಷ್ಮಿ ದೇವಿ ವೀರಣ್ಣ ದಂಪತಿ ಸತೀಶ್ ಜಾರಕಿಹೊಳಿ ಅವರನ್ನು ಸನ್ಮಾನಿಸಿ,  ಗೌರವಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅಬ್ದುಲ್ ಜಬ್ಬಾರ್, ಮುಖಂಡರುಗಳಾದ ಎಂ.ಟಿ. ಸುಭಾಶ್ಚಂದ್ರ, ಹೊದಿಗೆರೆ ರಮೇಶ್, ವಿನಾಯಕ ಪೈಲ್ವಾನ್, ಎನ್. ಎಂ. ಆಂಜನೇಯ ಗುರೂಜಿ, ಕೆ. ಪಾಲಯ್ಯ, ಕೆ.ಎಸ್. ಬಸವಂತ್, ಶ್ರೀಮತಿ ಸವಿತಾ ಗಣೇಶ್ ಹುಲ್ಲುಮನೆ, ಉದಯ ಕುಮಾರ್, ಕರಿಗಾರ ಬಸಪ್ಪ, ಎಂ. ಹಾಲೇಶ್, ಎಸ್.ಕೆ. ಚಂದ್ರಶೇಖರ್, ಜಿಗಳಿ ಆನಂದಪ್ಪ, ಕುಂಬಳೂರು ವಾಸಣ್ಣ, ರಘು ದೊಡ್ಮನಿ, ಬಿ.ವಿ.ಪರಶುರಾಮ್, ರಾಘವೇಂದ್ರ ಬಿ.ಕೆ. ಪವನ್ ಕುಮಾರ್, ಬಿ.ವಿ. ಪ್ರಮೋದ್, ಗುಮ್ಮನೂರು ಶಂಭಣ್ಣ ಮತ್ತಿತರರು ಉಪಸ್ಥಿತರಿದ್ದರು.

error: Content is protected !!