ಅತ್ಯುನ್ನತಿ ಪತನ ಹೇತು ಹು

ಆದಿ ಇರುವುದಕ್ಕೆ ಅಂತ್ಯವೂ ಇದೆ
ಕೊರಾನಾ ನಿನಗೆ ಅಂತ್ಯಕಾಲ ಬಂದಿದೆ
ಕಣ್ಣಿಗೆ ಕಾಣದೆ ಅಟ್ಟಹಾಸ ತೋರುತಿಹೆ
ಅತ್ಯುನ್ನತಿ ಪತನ ಹೇತು ಹು.

ಏರಿದ ವಿಮಾನ ಇಳಿಯಲೇಬೇಕು
ಉಕ್ಕುವ ಪ್ರವಾಹ ಇಳಿಯಲೇಬೇಕು
ಸೊಕ್ಕು ಇಳಿದ ಮನುಜ ಬೆಕ್ಕಿನಂತಾಗುವನು
ಮುದಿ ಹುಲಿ ಇಲಿಯಂತಾಗುವುದು.

ಮೆರೆದ ವೀರಪ್ಪನ್‌ಗತಿ ಏನಾಯಿತು?
ಅಲೆಗ್ಸಾಂಡರನಿಗೆ ವಿಶ್ವದ ಗೆಲುವಾಗಲಿಲ್ಲ
ಶಾಂತಿ ದೂತ ಬುದ್ಧ ಜಗವನ್ನೇ ಗೆದ್ದ
ಅಂಗುಲಿ ಮಾಲ ಬುದ್ಧನಿಗೆ ಶರಣಾದ.


ಕೆ.ಎನ್. ಸ್ವಾಮಿ
ಸಿದ್ಧಗಂಗಾ ಮಕ್ಕಳ ಲೋಕ, ನಿಟುವಳ್ಳಿ, ದಾವಣಗೆರೆ.

error: Content is protected !!