ಕೊರೊನಾ ಎಂಬ ವಿಷ ಕಣಕೆ ಬಲಿಯಾದೆ ಏತಕೆ?

ಕೊರೊನಾ ಎಂಬ ವಿಷ ಕಣಕೆ ಬಲಿಯಾದೆ ಏತಕೆ?
ಸುಖ ಶಾಂತಿ ನಾಶಕೆ…ಮನುಜಾ…

ಬಂಧು, ಬಳಗ ಜನರು ಎಲ್ಲರೂ
ಮೇಲೆ ಹೋಗಲು ಇನ್ನೆಲ್ಲಿ ಬರುವರು?

ಲಾಕ್‌ಡೌನ್ ಇಲ್ಲದೆ, ದೂರ ನಿಲ್ಲದೆ ಹರಡಿತು
ಈ ರೋಗ ಉಪೇಕ್ಷೆ ಯಿಂದಲೇ…

ಈ ಸಂಚು ಯಾರದೋ? ಆ ಹೊಂಚು ಯಾರದೋ?
ಮನು ಕುಲಕೆ ಈ ನಂಜು ತಗಲಿಸಿ
ನಾಶ ಮಾಡಿದರು ಈ ಲೋಕ ಮಾನವಾ…

ಕೊರೊನಾ ಎಂಬ ವಿಷ ಕಣಕೆ ಬಲಿಯಾದೆ ಏತಕೆ?
ಸುಖ ಶಾಂತಿ ನಾಶಕೆ…ಮನುಜಾ…

ಸೂರ್ಯ, ಚಂದ್ರಾ, ಗಗನಾ, ಜೈವಿಕ ಶೋಧಕರೆಲ್ಲರೂ,
ಈ ಜಗಕೆ ಬಂದರೂ, ಈಗ ಎಲ್ಲಿ ಹೋದರು?

ಎಷ್ಟೇ  ಕಲಿತರೂ, ಏನೇ ಕಲಿತರೂ, ಪ್ರಯೋಜನವಾಗದಾದರು
ಇದಕೆ ಲಸಿಕೆ ಇಲ್ಲವೇ? ಗುಳಿಗೆ ಇಲ್ಲವೇ? ಬೇರೆ ದಾರಿ ಏನಿದೆ?

ಈ ಸಾವು ಎನ್ನುವಾ ಆ ನೋವು ಎನ್ನುವಾ ಸಹಿಸದಾದ ಮಾನವಾ
ಕೊರೊನಾ ಎಂಬ ವಿಷ ಕಣಕೆ ಬಲಿಯಾದೆ ಏತಕೆ?
ಸುಖ ಶಾಂತಿ ನಾಶಕೆ…ಮನುಜಾ…


ಎಂ. ಸಿರ್ಸಿಕರ
ನಿವೃತ್ತ ಸಹಾಯಕ ನಿರ್ದೇಶಕರು
ದಾವಣಗೆರೆ. 9481917335

error: Content is protected !!