ಶಿರಮಗೊಂಡನಹಳ್ಳಿ ಗ್ರಾ.ಪಂ.ಗೆ ವಿನುತ ಅಧ್ಯಕ್ಷೆ, ಲಲಿತಮ್ಮ ಉಪಾಧ್ಯಕ್ಷೆ

ದಾವಣಗೆರೆ, ಫೆ.9- ತಾಲ್ಲೂಕಿನ ಶಿರಮಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಶ್ರೀಮತಿ ವಿನುತ ಎ.ಎಂ. ಸುರೇಶ್‌ ಬಾಬು, ಉಪಾಧ್ಯಕ್ಷರಾಗಿ ಶ್ರೀಮತಿ ಲಲಿತಮ್ಮ ದೇವೇಂದ್ರಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ದಾವಣಗೆರೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ನಾರಾಯಣ ರೆಡ್ಡಿ ಚುನಾವಣಾಧಿಕಾರಿ ಯಾಗಿದ್ದರು. ಈ ಸಂದರ್ಭದಲ್ಲಿ ಪಿಡಿಓ ಜೆ.ಎಲ್.ಕಾತ್ಯಾಯಿನಿ, ಕಾರ್ಯದರ್ಶಿ ಎನ್.ಬಿ.ಸುಮಂಗಳ ಮತ್ತಿತರರು ಉಪಸ್ಥಿತರಿದ್ದರು.

error: Content is protected !!