ಗಾಂಜಾ ಪ್ರಕರಣದಲ್ಲಿ ಸಿಲುಕಿಸಲು ಹೋದವನೇ ಅಂದರ್

ಗಾಂಜಾ ಪ್ರಕರಣದಲ್ಲಿ ಸಿಲುಕಿಸಲು ಹೋದವನೇ ಅಂದರ್ - Janathavaniಕೂಡ್ಲಿಗಿ, ಮಾ.15-  ಪ್ರೀತಿಗೆ ಅಡ್ಡಿಯಾದನೆಂಬ ದ್ವೇಷ ಇಟ್ಟುಕೊಂಡ ಯುವಕನೊಬ್ಬ ಅಡ್ಡಿಯಾದವನ ಮನೆ ಮೇಲೆ ಗಾಂಜಾ ಎಸೆದು, ಪೊಲೀಸರಿಗೆ ಕರೆ ಮಾಡಿ ಸಿಲುಕಿಸಲು ಹೋಗಿ, ತಾನೇ ಅಂದರ್ ಆದ ಘಟನೆ ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಲಗಾಪುರದ ಕೆ. ಚನ್ನಬಸಪ್ಪ ಎಂಬಾತನೇ ಜೈಲು ಪಾಲಾದ ಆರೋಪಿಯಾಗಿದ್ದಾನೆ.  

ಈತ ಬಡೇಲಡಕು ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದು, ಇವರಿಬ್ಬರು ಪರಸ್ಪರ ಕೂಡ್ಲಿಗಿಯಲ್ಲಿ ಭೇಟಿಯಾಗುತ್ತಿದ್ದುದನ್ನು ಕಂಡು ಬಡೇಲಡಕು ಬಸವರಾಜನು ಯುವತಿಯ ಮನೆಯಲ್ಲಿ ತಿಳಿಸಿದ್ದರಿಂದ ಪ್ರೀತಿಗೆ ಕಡಿವಾಣ ಬಿತ್ತು.  

ಇದೇ ದ್ವೇಷದಲ್ಲಿ  ಚನ್ನಬಸಪ್ಪ ಹೇಗಾದರೂ ಮಾಡಿ ಬಸವರಾಜನ ಮೇಲೆ ಕೇಸ್ ಮಾಡಿಸಬೇಕೆಂದು ಡ್ರಗ್ಸ್ ಹಾಗೂ ಗಾಂಜಾ ಕೇಸಲ್ಲಿ ಸಿನಿಮಾ ನಟರು ಜೈಲು ಸೇರಿದ ಘಟನೆ ನೆನಪು ಮಾಡಿಕೊಂಡ ಚನ್ನಬಸಪ್ಪನು ತನ್ನ ಪ್ರೀತಿಗೆ ಅಡ್ಡಿಯಾದ ಬಸವರಾಜನ ಮನೆ ಮೇಲೆ ತಾನು ಖರೀದಿಸಿ ತಂದ ಗಾಂಜಾವನ್ನು ಬಿಸಾಕಿ, ಪೊಲೀಸರಿಗೆ ಕರೆ ಮಾಡಿ ಬಸವರಾಜನ ಮನೆ ಮೇಲೆ ಗಾಂಜಾ ಇದೆ ಎಂದು ತಿಳಿಸಿದ್ದಾನೆ.

ಪೊಲೀಸ್ ಸಿಬ್ಬಂದಿಗಳಾದ ಶರಣಪ್ಪ ಮತ್ತು ಮಂಜುನಾಥ, ಕೂಡ್ಲಿಗಿ ಪಿಎಸ್ಐ ಸುರೇಶ ನೇತೃತ್ವದಲ್ಲಿ ಮತ್ತು ಬಳ್ಳಾರಿ ಎಸ್‌ಪಿ ಅಡಾವತ್, ಎಎಸ್‌ಪಿ ಲಾವಣ್ಯ, ಕೂಡ್ಲಿಗಿ ಡಿವೈಎಸ್‌ಪಿ ಹರೀಶ್‌ ರೆಡ್ಡಿ ಮತ್ತು ಕೂಡ್ಲಿಗಿ ಸಿಪಿಐ ವಸಂತ ವಿ. ಅಸೋದೆ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

error: Content is protected !!