ಮುಂದಿನ ತರಳಬಾಳು ಹುಣ್ಣಿಮೆ ಭರಮಸಾಗರದಲ್ಲಿ

ಕೊಟ್ಟೂರು, ಫೆ. 6 – ಮುಂದಿನ 2024ರ ತರಳಬಾಳು ಹುಣ್ಣಿಮೆ ಮಹೋತ್ಸವ ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ನೆರವೇರಲಿದೆ.

ಕೊಟ್ಟೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆಯ ಕೊನೆಯ ದಿನದ ಸಮಾರಂಭದಲ್ಲಿ ಈ ವಿಷಯ ತಿಳಿಸಿದ ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆಗೆ ಸಮೀಪದ ಭರಮಸಾಗರದಲ್ಲಿ ಮುಂದಿನ ಹುಣ್ಣಿಮೆ ನೆರವೇರಲಿದೆ ಎಂದರು. ಭರಮಸಾಗರ ಸೇರಿದಂತೆ ಚಿತ್ರದುರ್ಗ ಭಾಗದ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಜಾರಿಗೊಳಿಸುವಲ್ಲಿ ತರಳ ಬಾಳು ಜಗದ್ಗುರುಗಳು ಮಹತ್ವದ ಪಾತ್ರ ವಹಿಸಿದ್ದರು. 

error: Content is protected !!