ನೀವಿದ್ದಲ್ಲಿಯೇ `ಶ್ರಾವಣ ದರ್ಶನ’ ಮುರುಘಾ ಶರಣರಿಂದ `ಬೌದ್ಧಿಕ ಯಾನ’

ನೀವಿದ್ದಲ್ಲಿಯೇ `ಶ್ರಾವಣ ದರ್ಶನ' ಮುರುಘಾ ಶರಣರಿಂದ `ಬೌದ್ಧಿಕ ಯಾನ' - Janathavaniದಾವಣಗೆರೆ, ಜು.19- ಶ್ರಾವಣ ಮಾಸದ ಪ್ರಯುಕ್ತ ಚಿತ್ರದುರ್ಗದ ಮುರುಘಾ ಮಠದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರಿಂದ ನಾಡಿದ್ದು ದಿನಾಂಕ 21 ರಿಂದ ಬರುವ ಆಗಸ್ಟ್ 18 ರವರೆಗೆ ಪ್ರತಿದಿನ ಸಂಜೆ 6.30 ರಿಂದ 7.15 ರವರೆಗೆ ಶ್ರಾವಣ ಮಾಸದ ವಿಶೇಷ ಚಿಂತನೆ `ನೀವಿದ್ದಲ್ಲಿಯೇ ಶ್ರಾವಣ ದರ್ಶನ’ ಕಾರ್ಯಕ್ರಮ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮವು ಫೇಸ್‌ಬುಕ್ ಹಾಗೂ ಯೂಟ್ಯೂಬ್‌ನಲ್ಲಿ ನೇರ ಪ್ರಸಾರವಾಗಲಿದೆ. 

ದಾವಣಗೆರೆಯಲ್ಲೂ ರದ್ದು : ವಿರಕ್ತ ಮಠದಲ್ಲಿ ನಡೆಸಲುದ್ದೇಶಿಸಿದ್ದ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮವನ್ನು ಕೊರೊನಾ ಲಾಕ್‌ಡೌನ್‌ದಿಂದಾಗಿ ರದ್ದು ಮಾಡಲಾಗಿದೆ. ಡಾ. ಶಿವಮೂರ್ತಿ ಮುರುಘಾ ಶರಣರು ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ನಾಡಿದ್ದು ದಿನಾಂಕ 21 ರಿಂದ ಆಗಸ್ಟ್ 18 ರವರೆಗೆ ಸಂಜೆ 6.30 ರಿಂದ 7.15 ರವರೆಗೆ ನಡೆಸುವ ಪ್ರವಚನವನ್ನು ವೀಕ್ಷಿಸುವಂತೆ ಭಕ್ತಾದಿಗಳಲ್ಲಿ ಶ್ರೀ ಬಸವ ಪ್ರಭು ಸ್ವಾಮೀಜಿ ವಿನಂತಿಸಿದ್ದಾರೆ.

error: Content is protected !!