ಬಳ್ಳಾರಿ ಕಸಾಪಗೆ ಡಾ. ನಿಷ್ಠಿ ಅಧ್ಯಕ್ಷ

ಬಳ್ಳಾರಿ ಕಸಾಪಗೆ ಡಾ. ನಿಷ್ಠಿ ಅಧ್ಯಕ್ಷ - Janathavaniಹರಪನಹಳ್ಳಿ, ನ.21- ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ, ಜಿಲ್ಲಾ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ  ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗೆ  ಡಾ.ನಿಷ್ಟಿ ರುದ್ರಪ್ಪ 3,978 ಮತ ಪಡೆದು 2,425  ಅತ್ಯಧಿಕ ಮತಗಳಿಂದ ಜಯಶಾಲಿಯಾಗಿದ್ದಾರೆ.

ಪಟ್ಟಣದ ಸರ್ಕಾರಿ ಜ್ಯೂನಿಯರ್ ಕಾಲೇಜ್‍ನಲ್ಲಿ ಎರಡು ಮತದಾನ ಕೇಂದ್ರಗಳಿದ್ದು, ಜಿಲ್ಲಾ ಮತ್ತು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಬೆಳಿಗ್ಗೆಯಿಂದ ಸಂಜೆ 4 ಗಂಟೆಯವರೆಗೆ ಮಂದಗತಿಯಲ್ಲಿ ಸಾಗಿತ್ತು. 826 ಮತದಾನ ನಡೆದಿದೆ. ಅದರಲ್ಲಿ 566 ಮತಗಳು ಡಾ.ನಿಷ್ಟಿ ರುದ್ರಪ್ಪ ಅವರಿಗೆ ಬಿದ್ದಿವೆ.

error: Content is protected !!