ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ : 8 ಬೈಕ್ ಗಳ ವಶ

ದಾವಣಗೆರೆ, ಮಾ.22- ಅಂತರ್ ಜಿಲ್ಲಾ ಬೈಕ್ ಕಳ್ಳನನ್ನು ಬಂಧಿಸಿರುವ ಚನ್ನಗಿರಿ ಪೊಲೀಸರು ಒಟ್ಟು 8 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕು ದುಮ್ಮಿ ಗ್ರಾಮದ ಈರಣ್ಣ ಯಾನೆ ಸುರೇಶ್ ಬಂಧಿತ. ಎಸ್ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ಉಪಾಧೀಕ್ಷಕ ಬಿ.ಎಸ್. ಬಸವರಾಜ ಹಾಗೂ ವೃತ್ತ ನಿರೀಕ್ಷಕ ಆರ್.ಆರ್. ಪಾಟೀಲ್ ಮುಂದಾಳತ್ವದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಪಿಎಸ್ಐಗಳಾದ ಜಿ. ಜಗದೀಶ್, ಬಿ.ಎಸ್. ರೂಪ್ಲಿಬಾಯಿ ಮತ್ತು ಸಿಬ್ಬಂದಿಗಳಾದ ರುದ್ರೇಶ್, ಎಂ. ರುದ್ರೇಶ್, ರಂಗಪ್ಪ, ಧರ್ಮಪ್ಪ, ಮಂಜುನಾಥ ಪ್ರಸಾದ್, ಕೊಟ್ರೇಶ್, ಪ್ರವೀಣ್ ಗೌಡ, ಮಹಮ್ಮದ್ ಖಾನ್ ಆರೋಪಿಯನ್ನು ಬಂಧಿಸಿ, ವಿವಿಧ ಕಡೆ ಕಳ್ಳತನ ಮಾಡಿದ್ದ 4 ಲಕ್ಷ ಮೌಲ್ಯದ ವಿವಿಧ ಕಂಪೆನಿಯ ಒಟ್ಟು 8 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

error: Content is protected !!