ಸಂತರು, ದಾರ್ಶನಿಕರು, ಶರಣರು ಎಲ್ಲಾ ಜಾತಿಗೂ ಸಿಮೀತವಾಗಿದ್ದರು

ಕೊಟ್ಟೂರಿನ ಕಾರ್ಯಕ್ರಮದಲ್ಲಿ ಸಂಸದ ವೈ.ದೇವೆಂದ್ರಪ್ಪ

ಕೊಟ್ಟೂರು, ಫೆ. 16 – ಎಲ್ಲಾ ಜನಾಂಗಗಳಲ್ಲಿ ಸಂತರು, ದಾರ್ಶನಿಕರು, ಶರಣರು, ಸಮಾಜ  ಸುಧಾರಕರು ಇದ್ದು ಅವರೆಲ್ಲರು ಅವರ ಜಾತಿಯವರಿಗೆ ಮಾತ್ರ ಸೀಮಿತರಾಗದೇ ಇಡೀ ಮನುಕುಲದ ಏಳಿಗೆಗಾಗಿ ಶ್ರಮಿಸಿ ಅಮರರಾಗಿದ್ದಾರೆ. ಅಂತಹ ದಾರ್ಶನಿಕರಲ್ಲಿ ಸಂತ ಸೇವಾಲಾಲರೂ ಒಬ್ಬರಾಗಿದ್ದಾರೆ ಎಂದು ಸಂಸದ ವೈ.ದೇವೆಂದ್ರಪ್ಪ ತಿಳಿಸಿದರು.

ಇಲ್ಲಿನ ತಾಲ್ಲೂಕು ಕಛೇರಿಯಲ್ಲಿ ಸಂತ ಸೇವಾಲಾಲ್ ಮಹಾರಾಜರ 282 ನೇ ವರ್ಷದ ಜಯಂತಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು  ಮಾತನಾಡಿದರು. 

ಸಂತ ಸೇವಾಲಾಲರು ಹಸಿದವರಿಗೆ ಅನ್ನ, ಬಾಯಾರಿದವರಿಗೆ ನೀರು ಪ್ರಾಪ್ತಿ ಮಾಡಲು ಶ್ರಮಿಸಬೇಕು ಎಂದು ಸಂದೇಶ ನೀಡಿ ಮಾನವೀಯ ಮೌಲ್ಯ ಮರೆದಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾ.ಪಂ ಅಧ್ಯಕ್ಷ ಗುರುಮೂರ್ತಿ ಶಾನುಭೋಗರ್, ತಹಶೀಲ್ದಾರ್ ಜಿ.ಆನಿಲ್ ಕುಮಾರ್‍, ವೆಂಕಟೇಶ್ ನಾಯ್ಕ್, ಜಿ.ಪಂ ಸದಸ್ಯೆ ಉಮಾದೇವಿ , ಕೊಟ್ರೇಶ್, ಭೀಮಾನಾಯ್ಕ್, ಕೃಷ್ಣನಾಯ್ಕ್, ಜಯಪ್ರಕಾಶ್‌ ನಾಯ್ಕ್‍, ಏರ್‍ಟೆಲ್ ಚಂದ್ರು, ನಾಗ್ಯನಾಯ್ಕ್, ತಿಂದಪ್ಪ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸಿ.ಎಂ.ಗುರುಬಸವರಾಜ್ ನೆರವೇರಿಸಿದರು.

error: Content is protected !!