ಹರಿಹರದ ಹರಿಹರೇಶ್ವರ ಬ್ಯಾಂಕ್ ಅಧ್ಯಕ್ಷರಾಗಿ ಜಿ.ಕೆ. ಮಲ್ಲಿಕಾರ್ಜುನ

ಹರಿಹರ, ಫೆ.11- ನಗರದ ಪ್ರತಿಷ್ಠಿತ ಶ್ರೀ ಹರಿಹರೇಶ್ವರ ಬ್ಯಾಂಕ್ ಅಧ್ಯಕ್ಷರಾಗಿ ಜಿ.ಕೆ. ಮಲ್ಲಿಕಾರ್ಜುನ, ಕೆ.ರವಿಚಂದ್ರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 

ಬ್ಯಾಂಕಿನ ಸಭಾಂಗಣದಲ್ಲಿ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಿ.ಕೆ. ಮಲ್ಲಿಕಾರ್ಜುನ ಅವರು ಏಳು ಮತಗಳನ್ನು ಪಡೆದು ಆಯ್ಕೆಯಾದರು. ಅವರ ಪ್ರತಿಸ್ಪರ್ಧಿಯಾಗಿದ್ದ ಪರಶುರಾಮ ಅಂಬೇಕರ್  5 ಮತಗಳನ್ನು ಪಡೆದು ಪರಾಜಿತರಾದರು. 

ಉಪಾಧ್ಯಕ್ಷ ಸ್ಥಾನಕ್ಕೆ ಕೆ. ರವಿಚಂದ್ರ ಮಾತ್ರ ನಾಮಪತ್ರವನ್ನು ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಜಿ. ವೀರಯ್ಯ, ಬಿ.ಕೆ. ಅನ್ವರ್ ಪಾಷಾ, ಕೆ. ಅಣ್ಣಪ್ಪ, ವಾಸುದೇವ ಹೋವಳೆ, ಟಿ. ಓಬಳಪ್ಪ, ಹೆಚ್. ಅಜ್ಜಯ್ಯ, ಬಿ.ಹೆಚ್.  ರಾಧಾ,  ಆರ್. ವಿದ್ಯಾ ಮೆಹರ್ವಾಡೆ, ಹೆಚ್.ಎಂ. ವೀರಭದ್ರಯ್ಯ, ನಾಗೇಂದ್ರಸಾ ಕಾಟ್ವೆ, ಸಿಬ್ಬಂದಿಗಳಾದ ರೇಖಾ ರವೀಂದ್ರ, ಪಿ. ಶಶಿಕಲಾ, ಶಿವಕುಮಾರ್, ಪ್ರಶಾಂತ, ಎಸ್. ಮಂಜುನಾಥ್, ಪ್ರಕಾಶ್, ಸತ್ಯನಾರಾಯಣ ಹೋವಳೆ, ಮಧು ಇತರರು ಹಾಜರಿದ್ದರು.  

ಎನ್.ಜಿ. ರುದ್ರಪ್ಪ ಚುನಾವಣಾ ಅಧಿಕಾರಿಯಾಗಿದ್ದರು.

error: Content is protected !!