ಹರಪನಹಳ್ಳಿ ಛಲವಾದಿ ಸಭಾದ ಅಧ್ಯಕ್ಷರಾಗಿ ನಾಗರಾಜ್ ನಿಟ್ಟೂರು ಅವಿರೋಧ ಆಯ್ಕೆ

ಹರಪನಹಳ್ಳಿ, ಏ.4- ತಾಲ್ಲೂಕಿನ ಛಲ ವಾದಿ ಮಹಾಸಭಾದ ಅಧ್ಯಕ್ಷರಾಗಿ ನಾಗರಾಜ್ ನಿಟ್ಟೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾಜದ ಮುಖಂಡರ ಸಮ್ಮುಖದಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಸಿದ್ದು, ಅಧ್ಯಕ್ಷರಾಗಿ ಬಾಗಳಿ ಬಸವರಾಜ್, ಉಪಾಧ್ಯಕ್ಷರಾಗಿ ಮೈದೂರು ಸಿ.ಕೊಟ್ರೇಶ್, ರಾಗಿಮಸಲವಾಡದ ಭೀಮಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಸಿ. ಪ್ರತಾಪ್, ಸಹ ಕಾರ್ಯ ದರ್ಶಿಗಳಾಗಿ ಬಾಗಳಿಯ ಪಿ.ಸಿ.ಕೊಟ್ರೇಶ್, ಅಲಮರಸೀಕರೆ ಪ್ರಭಾಕರ್, ಸಂಘಟನಾ ಕಾರ್ಯದರ್ಶಿಯಾಗಿ ಚಿಗಟೇರಿ ಶಿವಕುಮಾರ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

error: Content is protected !!