ಈ ಬಾರಿ ಪ್ರತ್ಯೇಕ ಕೃಷಿ ಬಜೆಟ್ ಇಲ್ಲ

ಈ ಬಾರಿ ಪ್ರತ್ಯೇಕ ಕೃಷಿ ಬಜೆಟ್ ಇಲ್ಲ - Janathavaniದಾವಣಗೆರೆ, ಜ.31- ಈ ಬಾರಿ ರಾಜ್ಯದಲ್ಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಮಾಡಲಾಗುತ್ತಿಲ್ಲ. ನಾಳೆ ಕೇಂದ್ರದಿಂದ ಒಳ್ಳೆಯ ಕೃಷಿ ಬಜೆಟ್ ನೀಡುವ ನಿರೀಕ್ಷೆ ಇದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು. ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಲೆಂದು ಇಂದು ಸಂಜೆ ನಗರಕ್ಕಾಗಮಿಸಿದ್ದ ಅವರು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಡಬಲ್ ಇಂಜಿನ್ ಇದ್ದಂತೆ ಎಂದು ಅಮಿತ್ ಶಾ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಒಳ್ಳೆಯ ಕೃಷಿ ಬಜೆಟ್ ನೀಡುತ್ತಾರೆ ಎನ್ನುವ ನಿರೀಕ್ಷೆ ಇದೆ. ಬಜೆಟ್‍ನಲ್ಲಿ ಕೃಷಿ ವಲಯಕ್ಕೆ ಒತ್ತು ನೀಡುವ ನಿರೀಕ್ಷೆ ಇದೆ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಕೃಷಿ ಕ್ಷೇತ್ರಕ್ಕೆ ಏನೇನು ಬೇಡಿಕೆ ಇದೆ ಎಂದು ನಾವು ನೀಡಿದ್ದೇವೆ ಎಂದು ಹೇಳಿದರು.

ಯುಗಾದಿ ವೇಳೆಗೆ ರಾಜ್ಯದಲ್ಲಿ ಸಿಎಂ ಬದಲಾವಣೆಯಾಗುತ್ತಾರೆ ಎಂದು ಶಾಸಕ ಬಸನಗೌಡ ಯತ್ನಾಳ್ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು,  ಯತ್ನಾಳ್ ಮಾತಿಗೆ ಬೆಲೆ ಕೊಡುವ ಅವಶ್ಯಕತೆ ಇಲ್ಲ. ಅವರು ತೋಳ ಬಂತು ತೋಳ ಎನ್ನುವ ಹಾಗೇ ಮಾತನಾಡುತ್ತಾರೆ. ಒಂದೊಂದೆ ಹೇಳುತ್ತಾ ಹೋಗುತ್ತಾರೆ. ನಾಳೆ ಬಾ ಅನ್ನೋ ಬೋರ್ಡ್ ಹಾಕೋ ಹಾಗೇ ಯತ್ನಾಳ್ ಮಾತು ಕೂಡ ಎಂದು ವ್ಯಂಗ್ಯವಾಡಿದರು.

ಕೇಂದ್ರ ನಾಯಕ ಅಮಿತ್ ಶಾ ಈಗಾಗಲೇ ಮುಖ್ಯಮಂತ್ರಿಗಳ ವಿಚಾರದಲ್ಲಿ ಮುಂದಿನ ಎರಡುವರೆ ವರ್ಷ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಅದರ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಎಂದರು.

ಒಳ್ಳೇ ಚಿತ್ರವಿದ್ದರೆ ನೋಡೇ ನೋಡ್ತಾರೆ: ಒಳ್ಳೆ ಚಿತ್ರ ಇದ್ದರೆ ನೋಡೇ ನೋಡ್ತಾರೆ ಎಂದು ರಾಬರ್ಟ್ ಚಿತ್ರ ಬಿಡುಗಡೆಯ ಗೊಂದಲಕ್ಕೆ ಹೇಳಿಕೆ ನೀಡಿದರು.

ರಾಬರ್ಟ್ ಚಿತ್ರ ಬಿಡುಗಡೆ ಇದ್ದಾಗ ಆಂಧ್ರದಲ್ಲಿ ದೊಡ್ಡ ನಟರ ಚಿತ್ರ ಬಿಡುಗಡೆ ಇತ್ತು ಎಂದು ಚಿತ್ರಮಂದಿರ ನೀಡಿಲ್ಲ ಎನ್ನಲಾಗುತ್ತಿದೆ. ಈಗಾಗಲೇ ಫಿಲ್ಮ್ ಚೇಂಬರ್ ಗೆ ದೂರು ಸಹ ನೀಡಿದ್ದಾರೆ ಬಗೆಹರಿಸುತ್ತಾರೆ ಎಂದರು.

error: Content is protected !!