ಕುಟುಂಬದ ಸಬಲೀಕರಣಕ್ಕೆ ಮಹಿಳೆಯೇ ಸ್ಫೂರ್ತಿ

ಕುಟುಂಬದ ಸಬಲೀಕರಣಕ್ಕೆ ಮಹಿಳೆಯೇ ಸ್ಫೂರ್ತಿ

ಕಲಾಕುಂಚದ `ದಾವಣಗೆರೆ ಗೃಹಿಣಿ’ ಸ್ಪರ್ಧೆಯಲ್ಲಿ ಡಾ.ಆರತಿ ಸುಂದರೇಶ್

ದಾವಣಗೆರೆ,ಮಾ.10-   ತುಂಬು ಕುಟುಂಬದಲ್ಲಿ ಸಂಸ್ಕೃತಿ, ಸಂಸ್ಕಾರಗಳ ಸಬಲೀಕರಣಕ್ಕೆ  ಮಹಿಳೆಯರೇ  ಸ್ಪೂರ್ತಿ ಎಂದು  ಡಾ.ಆರತಿ ಸುಂದರೇಶ್ ಹೇಳಿದರು.

ನಗರದ ಕಲಾಕುಂಚ ಮಹಿಳಾ ವಿಭಾಗದ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ   ಹಮ್ಮಿಕೊಳ್ಳಲಾಗಿದ್ದ `ದಾವಣಗೆರೆ ಗೃಹಿಣಿ’ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ತ್ರೀಯರು ಕೇವಲ ಅಡುಗೆ ಮನೆಗೆ ಸೀಮಿತ ವಾಗದೇ ಅವರಲ್ಲಿ ಹುದುಗಿರುವ ಪ್ರತಿಭೆಗಳನ್ನು ಅನಾವರಣ ಗೊಳಿಸುವ ಸದುದ್ಧೇಶ ಕಲಾಕುಂಚ ಸಂಸ್ಥೆಗೆ ಇದೆ. ಈ ಹಂತದಲ್ಲಿ ಸಾವಿರಾರು ಮಹಿಳೆಯರನ್ನು ಉಳಿಸಿ, ಬೆಳೆಸಿ ಅವರಲ್ಲಿನ ಖಿನ್ನತೆ ಮನಸ್ಸುಗಳನ್ನು ಪುಳಕಿತಗೊಳಿಸುವ ಈ `ದಾವಣಗೆರೆ ಗೃಹಿಣಿ ಸ್ಪರ್ಧೆ’ ನಿಜಕ್ಕೂ ಶ್ಲ್ಯಾಘನೀಯ ಎಂದು  ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ  ಆಗಮಿಸಿದ್ದ  ಡಾ.ಮಂಗಳಾ ಶೇಖರ್ ಮಾತನಾಡಿ,  ಜೀವನ ಕೇವಲ ದುಡಿಮೆಗಷ್ಟೇ ಸೀಮಿತವಾಗದೆ ಪುರುಷರು, ಮಹಿಳೆಯರಿಗೆ ಕಲೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿದರೆ ಇಡೀ ಮನೆತನವೇ ಸಂಸ್ಕೃತಿ, ಸಂಸ್ಕಾರ  ಪಡೆಯುತ್ತದೆ ಎಂದರು.

ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ  ಹೇಮಾ ಶಾಂತಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ನಾಡು, ನುಡಿಗಳ ವೈಭವೀಕರಣಕ್ಕೆ ಇಂತಹ ಚಟುವಟಿಕೆಗಳು ಪೂರಕ ಎಂದರು.

ವೇದಿಕೆಯಲ್ಲಿ  ಸಂಸ್ಥೆಯ ಸಂಸ್ಥಾಪಕರಾದ  ಜ್ಯೋತಿ ಗಣೇಶ್‍ಶೆಣೈ, ಗೌರವ ಅಧ್ಯಕ್ಷರಾದ ವಸಂತಿ ಮಂಜುನಾಥ್, ಕಲಾಕುಂಚ ಡಿಸಿಎಂ  ಶಾಖೆಯ ಅಧ್ಯಕ್ಷರಾದ  ಶಾರದಮ್ಮ ಶಿವನಪ್ಪ, ಎಲೆಬೇತೂರು ಶಾಖೆಯ ಅಧ್ಯಕ್ಷರಾದ   ಡಾ. ನಿರ್ಮಲಾ ಕುಲಕರ್ಣಿ ವೇದಿಕೆಯಲ್ಲಿ  ಉಪಸ್ಥಿತರಿದ್ದರು. 

ಸಂಧ್ಯಾ ಶ್ರೀನಿವಾಸ್‍  ಪ್ರಾರ್ಥನೆಯೊಂದಿಗೆ ಆರಂಭವಾದ ಸಮಾರಂಭಕ್ಕೆ ಶ್ರೀಮತಿ ಚಂದ್ರಶೇಖರ ಅಡಿಗ ಸ್ವಾಗತಿಸಿದರು.      ಶಿಲ್ಪಾ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.   ಲೀಲಾ ಸುಭಾಷ್ ವಂದಿಸಿದರು.  

error: Content is protected !!