ನಗರದ ಸಾಯಿ ಮಂದಿರದಲ್ಲಿ ನಾಳೆ ಗುರುಪೂರ್ಣಿಮೆ, ವಿಶೇಷ ಪೂಜೆ

ನಗರದ ಸಾಯಿ ಮಂದಿರದಲ್ಲಿ ನಾಳೆ ಗುರುಪೂರ್ಣಿಮೆ, ವಿಶೇಷ ಪೂಜೆ

ದಾವಣಗೆರೆ, ಜು. 19- ಸ್ಥಳೀಯ ಎಂ.ಸಿ.ಸಿ. `ಎ’ ಬ್ಲಾಕ್‌ನಲ್ಲಿ ರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ನಾಡಿದ್ದು ದಿನಾಂಕ 21ರ ಭಾನುವಾರ ಗುರು ಪೂರ್ಣಿಮೆ ಆಚರಿಸಲಾಗುವುದು.

ಅಂದು ಬೆಳಿಗ್ಗೆ 6 ಕ್ಕೆ ಕಾಕಡಾ ರತಿ, 9 ಕ್ಕೆ ದೀಪಾ ರಾಧನೆ, ಕಲಶ ಸ್ಥಾಪನೆ, ನಂತರ ಗೋಪುರ ಧ್ವಜಾರೋಹಣ ಕಾರ್ಯ ಕ್ರಮಗಳು ಏರ್ಪಾಡಾಗಿವೆ ಎಂದು ಶ್ರೀ ಸಾಯಿ ಟ್ರಸ್ಟ್ ಕಾರ್ಯದರ್ಶಿ ಎಂ. ಶಿವಪ್ಪ ತಿಳಿಸಿದ್ದಾರೆ. ಶ್ರೀ ಜಡೇಸಿದ್ಧ ಶಿವಯೋ ಗೀಶ್ವರ ಶಾಂತಾಶ್ರಮದ ಶ್ರೀ ಶಿವಾನಂದ ಸ್ವಾಮೀಜಿ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಸಾಯಿ ಟ್ರಸ್ಟ್ ಕಾರ್ಯದರ್ಶಿ ಎಸ್.ಎಸ್. ಗಣೇಶ್, ಉಪಾಧ್ಯಕ್ಷ ಅಥಣಿ ವೀರಣ್ಣ ಹಾಗೂ ಇತರೆ ಗಣ್ಯರು ಉಪಸ್ಥಿತರಿರುವರು.

ಬೆಳಿಗ್ಗೆ 7 ರಿಂದ 2.30 ರವರೆಗೆ ಶ್ರೀ ಬಾಬಾರವರ ಬೆಳ್ಳಿಯ ಮೂರ್ತಿಗೆ ಹಾಲಿನ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಹಾಗೂ 12 ಕ್ಕೆ ಮಹಾಮಂಗಳಾರತಿ ನಡೆಸಲಾಗುವು ದು.  ಬೆಳಿಗ್ಗೆ 9 ರಿಂದ ಮಧ್ಯಾಹ್ನ 12ರವರೆಗೆ ಸಾಯಿ ಸತ್ಯನಾರಾಯಣ ಪೂಜೆ,  ರಾತ್ರಿ 8.30 ಕ್ಕೆ ಪಾಲಕಿ ಉತ್ಸವ, ಶ್ರೀಸಾಯಿ ಧುನಿ ಪೂಜೆ, ಶೇಜಾರತಿ ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯುವುದು.

error: Content is protected !!