ಶ್ರೀಗಳ ಆಷಾಡ ಮಾಸದ ಇಷ್ಟಲಿಂಗ ಮಹಾಪೂಜೆ

ಶ್ರೀಗಳ ಆಷಾಡ ಮಾಸದ ಇಷ್ಟಲಿಂಗ ಮಹಾಪೂಜೆ

ರಾಣೇಬೆನ್ನೂರು, ಜು. 19 – ಉಜ್ಜಯನಿ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶ್ರೀಗಳ ಆಷಾಡ ಮಾಸದ ಇಷ್ಠಲಿಂಗ ಮಹಾಪೂಜೆ ಮೂರು ದಿನಗಳ  ಕಾರ್ಯಕ್ರಮ ಇಂದು ಉದ್ಘಾಟನೆ. ಆವರಗೊಳ್ಳದ ಓಂಕಾರ ಶ್ರೀ ಗಳಿಂದ ನಡೆಯಿತು. ಹೊನ್ನಾಳಿ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಶ್ರೀ ನೇತೃತ್ವ ವಹಿಸಿದ್ದರು. 

ಸಂಜೆ ಜಗದ್ಗುರುಗಳನ್ನ ಸಕಲ ಬಿರುದಾವಳಿಗಳೊಂದಿಗೆ ಪೂರ್ಣಕುಂಬ ಹಾಗೂ ಮಂಗಲಕರ ವಾದ್ಯಗಳೊಂದಿಗೆ  ಸಾರೋಟಿನಲ್ಲಿ ಮೃತ್ಯುಂಜಯ ‌ ಮಠದಿಂದ ಚನ್ನೇಶ್ವರ ಮಠಕ್ಕೆ ಕರೆತರಲಾಯಿತು. ನಂತರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಿತು.

ಜಗದ್ಗುರುಗಳ ಸದ್ಭಕ್ತರಾದ ಬಸವರಾಜ ಪಟ್ಟಣಶೆಟ್ಟಿ, ಸುನಂದ ತಿಳವಳ್ಳಿ,  ಕಸ್ತೂರಿ ಪಾಟೀಲ, ಫಕ್ಕಿರೇಶ ಭಸ್ಮಾಂಗಿಮಠ, ಹಾಲೇಶ ಗೌಳಿ, ಎಸ್.ಆರ್.ಕೆ. ಬಸವರಾಜ ಮತ್ತಿತರರು ಕಾರ್ಯಕ್ರಮದಲ್ಲಿ ಪಸಲ್ಗೊಂಡಿದ್ದರು. ಕೊನೆಯಲ್ಲಿ ಜಗದ್ಗುರುಗಳಿಂದ ಆಶಿರ್ವಚನ ನಡೆಯಿತು.

error: Content is protected !!