ಹಡಗಲಿ: ಕನಕ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷ ಬಸವರಾಜಪ್ಪ, ಉಪಾಧ್ಯಕ್ಷ ಬೀರಪ್ಪ

ಹಡಗಲಿ: ಕನಕ ಪತ್ತಿನ ಸಹಕಾರ ಸಂಘಕ್ಕೆ  ಅಧ್ಯಕ್ಷ ಬಸವರಾಜಪ್ಪ, ಉಪಾಧ್ಯಕ್ಷ ಬೀರಪ್ಪ

ಹೂವಿನಹಡಗಲಿ, ನ. 21- ಸ್ಥಳಿಯ ಕನಕ ಪತ್ತಿನ ಸಹಕಾರ ಸಂಘದ   ಅಧ್ಯಕ್ಷರಾಗಿ ಎಂ. ಬಸವರಾಜಪ್ಪ ಹೊನ್ನೂರು, ಉಪಾಧ್ಯಕ್ಷರಾಗಿ ಎಂ. ಬೀರಪ್ಪ ತಿಪ್ಪಾಪುರ ಅವರು ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಈ ಸಂದರ್ಭದಲ್ಲಿ ನಿರ್ದೇಶಕರು, ಕುರುಬ ಸಮಾಜದ ಮುಖಂಡರಾದ ಎಂ. ಪರಮೇಶ್ವರಪ್ಪ, ಬಿ. ಹನುಮಂತಪ್ಪ, ಹೆಚ್. ಬೀರಪ್ಪ, ಈ. ಟಿ. ಲಿಂಗರಾಜ್, ಎಚ್. ವಿಶ್ವನಾಥ್, ಎಸ್. ಮಲ್ಲಿಕಾರ್ಜುನ,  ವ್ಯವಸ್ಥಾಪಕ ಕೆ. ಬಿ. ಮಹಾಬಲೇಶ್ವರ  ಮತ್ತಿತರರು ಹಾಜರಿದ್ದರು.

error: Content is protected !!