ನಗರದಲ್ಲಿ ಇಂದು ಶ್ರೀ ಕಟ್ಟೆ ದುರುಗಮ್ಮದೇವಿ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ

ನಗರದಲ್ಲಿ ಇಂದು ಶ್ರೀ ಕಟ್ಟೆ ದುರುಗಮ್ಮದೇವಿ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ

ಶ್ರೀ ಕಟ್ಟೆ ದುರುಗಮ್ಮದೇವಿ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ವತಿಯಿಂದ  ಹೊಂಡದ ರಸ್ತೆಯ ಶ್ರೀ ಕಟ್ಟೆ ದುರುಗಮ್ಮ ದೇವಿ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ನೂತನ ದೇವಸ್ಥಾದ ಉದ್ಘಾಟನೆ ಹಾಗೂ ಕಳಸಾರೋಹಣವು ಇಂದು ಮತ್ತು ನಾಳೆ ನಡೆಯಲಿದೆ.

ಇಂದು ಸಂಜೆ 6-30ಕ್ಕೆ ಶಂಕರ ನಾರಾಯಣ ಶಾಸ್ತ್ರಿ ಇವರ ಪೌರೋಹಿತ್ಯದಲ್ಲಿ ಹೋಮ, ಹವನ ಇರುತ್ತದೆ. ರಾತ್ರಿ 10ರಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ  ಪುರಾಣಿಕ ಕೆ. ರೇವಣಪ್ಪ (ದೊಡ್ಡಬಾತಿ) ಇವರಿಂದ ದೇವಿಯ ಪ್ರವಚನ ಇರುತ್ತದೆ. 

ನಾಳೆ ಬೆಳಿಗ್ಗೆ 5 ಗಂಟೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಆವರಗೊಳ್ಳ ಪುರವರ್ಗ ಮಠ ಶ್ರೀ  ಓಂಕಾರ ಶಿವಾಚಾರ್ಯ ಸ್ವಾಮಿಗಳವರಿಂದ ದೇವಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ.

ನೂತನ ದೇವಸ್ಥಾನವನ್ನು ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸುವರು. ಕಳಸಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ನೆರವೇರಿಸಲಿದ್ದಾರೆ. 

ಮುಖ್ಯ ಆತಿಥಿಗಳಾಗಿ ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ, ಮಹಾಪೌರರಾದ ವಿನಾಯಕ ಪೈಲ್ವಾನ್, ವಾರ್ಡ್ ಸದಸ್ಯ ಶಾಂತಕುಮಾರ್ ಸೋಗಿ ಭಾಗವಹಿಸಲಿದ್ದಾರೆ. 

ನಂತರ ಮಧ್ಯಾಹ್ನ 12 ರಿಂದ ಪ್ರಸಾದದ ವ್ಯವಸ್ಥೆ ಇರುತ್ತದೆ ಎಂದು ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್‌ ಅಧ್ಯಕ್ಷ ಕೆ.ಎಸ್‌. ಶಂಕರಪ್ಪ ತಿಳಿಸಿದ್ದಾರೆ.

error: Content is protected !!