ಹರಿಹರ, ಅ. 2- ದಾವಣಗೆರೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸೂಕ್ತ ನಿವೇಶನ ನೀಡುವಂತೆ ಆಗ್ರಹಿಸಿ, ಹರಿಹರ ನಗರಕ್ಕೆ ಭಾನುವಾರ ಆಗಮಿಸಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಪ್ರೊ.ಎ.ಬಿ. ರಾಮಚಂದ್ರಪ್ಪ, ಕುಂದುವಾಡ ಮಂಜುನಾಥ್, ಹೆಚ್. ಮಲ್ಲೇಶಪ್ಪ, ಹೆಗ್ಗೆರೆ ರಂಗಪ್ಪ, ಅನಿಸ್ ಪಾಷ, ಕತ್ತಲಗೆರೆ ತಿಪ್ಪಣ್ಣ, ಪಿ.ಜೆ. ಮಹಾಂತೇಶ್, ವಿಜಯಲಕ್ಷ್ಮಿ, ಹೆಚ್.ಸಿ. ಮಲ್ಲಪ್ಪ, ಡಿ. ಹನುಮಂತಪ್ಪ, ಹಾಲೇಶ್, ಮಂಜುನಾಥ್, ಪ್ರದೀಪ್, ಚೌಡಪ್ಪ, ಕುಂದುವಾಡ ಮಹಾಂತೇಶ್, ಆಟೋ ರವಿ, ಜಯಪ್ಪ, ಐರಣಿ ಚಂದ್ರು ಇದ್ದರು.
ಅಂಬೇಡ್ಕರ್ ಭವನಕ್ಕೆ ಸೂಕ್ತ ನಿವೇಶನ ನೀಡಲು ಆಗ್ರಹ
![17 ambedkar Bhavana 03.10.2023 ಅಂಬೇಡ್ಕರ್ ಭವನಕ್ಕೆ ಸೂಕ್ತ ನಿವೇಶನ ನೀಡಲು ಆಗ್ರಹ](https://janathavani.com/wp-content/uploads/2023/10/17-ambedkar-Bhavana-03.10.2023-860x339.jpg)