ಕೋಡಿ ಕ್ಯಾಂಪ್‌ನಲ್ಲಿ ನಾಳೆ ಅಮಾವಾಸ್ಯೆ

ಕೋಡಿ ಕ್ಯಾಂಪ್‌ನಲ್ಲಿ ನಾಳೆ ಅಮಾವಾಸ್ಯೆ

ದಾವಣಗೆರೆ, ಆ. 13 – ನಗರದ ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಸಮಿತಿ ಯಿಂದ ಮಾಗಾನಹಳ್ಳಿ ಕೋಡಿ ಕ್ಯಾಂಪ್‌ ಬಳಿ ಇರುವ ಶ್ರೀ ಕೊಟ್ಟೂರೇಶ್ವರ ಸ್ವಾಮಿ ಮಠದಲ್ಲಿ ಬೆನಕನ ಅಮಾವಾಸ್ಯೆ ಪ್ರಯುಕ್ತ ನಾಡಿದ್ದು ಶುಕ್ರವಾರ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಪಾದಗಳಿಗೆ 7 ರಿಂದ 9ರ ವರೆಗೆ ಅಭಿಷೇಕ, ವಿಶೇಷ ಪೂಜೆ ನಡೆಯಲಿದೆ. ನಂತರ ಭಕ್ತಾದಿಗಳಿಗೆ ಪ್ರಸಾದ ದಾಸೋಹ ನಡೆಯಲಿದೆ.

ಇದೇ ದಿನಾಂಕ 16ರ ಶನಿವಾರ ಬೆಳಿಗ್ಗೆ 6.30 ರಿಂದ 7.30ರ ವರೆಗೆ ವಿಶೇಷ ಪೂಜೆ, ಅಭಿಷೇಕ, ನಂತರ ಪ್ರಸಾದ ವಿನಿಯೋಗ ನಡೆಯಲಿದೆ. ಭಕ್ತಾ ದಿಗಳು ಆಗಮಿಸಿ, ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಕೃಪೆಗೆ ಪಾತ್ರರಾಗ ಬೇಕೆಂದು ದೇವಸ್ಥಾನ ಸಮಿತಿಯ ಕಣಕುಪ್ಪಿ  ಮುರುಗೇಶಪ್ಪ (96118 89 151), ಟಿ.ಜಿ. ಬಕ್ಕೇಶಪ್ಪ (91089 88898), ಬಿ. ಚಿದಾನಂದಪ್ಪ (98445 28449), ಮಲ್ಲಾಬಾದಿ ಗುರುಬಸವರಾಜ (79757 97079) ತಿಳಿಸಿದ್ದಾರೆ. ದಾಸೋಹ ಮನೆ ಮತ್ತು ಸಭಾಂಗಣ ಕಟ್ಟಡವು ಪ್ರಗತಿ ಹಂತದಲ್ಲಿದೆ. ಭಕ್ತಾದಿಗಳು ದೇಣಿಗೆ ಸಲ್ಲಿಸಲು ಕೋರಿದೆ.

error: Content is protected !!