ನೃತ್ಯ ವಿದ್ಯಾರ್ಥಿನಿ ಕು|| ಗುಣಶ್ರೀಗೆ ಬಹುಮಾನ

ನೃತ್ಯ ವಿದ್ಯಾರ್ಥಿನಿ ಕು|| ಗುಣಶ್ರೀಗೆ ಬಹುಮಾನ

ದಾವಣಗೆರೆ, ಜೂ. 25 – ತುಮಕೂರಿನಲ್ಲಿ ಈಚೆಗೆ ನಡೆದ ಡ್ಯಾನ್ಸ್ ಸ್ಕೂಲ್ ಮತ್ತು ಕೋರಿಯೋಗ್ರಾಫರ್ ಅಸೋಸಿಯೇಷನ್  ವತಿಯಿಂದ ಹಾಗೂ ನಮ್ಮ ಕರ್ನಾಟಕ ವಾಹಿನಿಯ ಸಾರಥ್ಯದಲ್ಲಿ ಆಯೋಜಿಸಿದ್ದ `ನೃತ್ಯ ವೈಭವ-2’ರಲ್ಲಿ ಭಾಗವಹಿಸಿದ್ದ ನಗರದ ನೃತ್ಯ ತಂಡ ಡಿ-ವೈರಸ್ ಸ್ಟನ್ನರ್‌ನ ನೃತ್ಯ ಸಂಯೋಜಕರಾದ ದಯಾನಂದ್ ಎಸ್. ಹಾಗೂ ಆನಂದ್ ಎಸ್. ಅವರಲ್ಲಿ ತರಬೇತಿ ಪಡೆದು, ಸೀನಿಯರ್ ಗ್ರೂಪ್ ಕಾಂಪಿಟೇಷನ್‌ನಲ್ಲಿ ಮೊದಲ ರನ್ನರ್ ಅಪ್ ಹಾಗೂ ಸೋಲೋ ಸೀನಿಯರ್ ವಿಭಾಗ ದಲ್ಲಿ ತರಳಬಾಳು ಶಾಲೆಯ ಹತ್ತನೇ ತರಗತಿ ವಿದ್ಯಾ ರ್ಥಿನಿ ಕು|| ಎಮ್‌.ವಿ. ಗುಣಶ್ರೀ ಎರಡನೇ ರನ್ನರ್ ಅಪ್ ಆಗಿ ದಾವಣಗೆರೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. 

ಗುಣಶ್ರೀ, ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ಎಂ.ಎಸ್. ವಿಠಲ್ ಮತ್ತು ಶ್ರೀಮತಿ ನಿರ್ಮಲ ದಂಪತಿ ಪುತ್ರಿ.

error: Content is protected !!