ಹರಿಹರ : ಸಬ್‌ರಿಜಿಸ್ಟ್ರಾರ್ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಹರಿಹರ : ಸಬ್‌ರಿಜಿಸ್ಟ್ರಾರ್ ಸಿಬ್ಬಂದಿ ಲೋಕಾಯುಕ್ತ ಬಲೆಗೆ - Janathavaniಹರಿಹರ, ಮೇ 21- ನಗರದ ಸಬ್‌ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿ ದಸ್ತು ಬರಹಗಾರ ಪರಮೇಶ್ವರ ಲಂಚವನ್ನು ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.

ನಗರದ ಮಂಜುನಾಥ್ ಎಂಬುವವರು ಮನೆಯನ್ನು ಖರೀ ದಿಸಿ ಸೇಲ್ ಡೀಡ್ ನೋಂದಣಿ ಪತ್ರವನ್ನು ಪಡೆಯಲು ಸಬ್ ರಿಜಿ ಸ್ಟ್ರಾರ್ ಕಚೇರಿಗೆ ಹೋಗಿ ದಸ್ತು ಬರಹಗಾರ ಪರಮೇಶ್ವರ್‌ರವರನ್ನು ಸಂಪರ್ಕಿಸಿದ್ದಾರೆ. ಆ ಸಮಯದಲ್ಲಿ ಪರಮೇಶ್ವರ್ 20 ಸಾವಿರ ಹಣವನ್ನು ನೀಡಿದರೆ ನೋಂದಣಿ ಪತ್ರವನ್ನು ನೀಡುವುದಾಗಿ ತಿಳಿಸಿ ದ್ದಾರೆ. ಮಂಜುನಾಥ್ ಅವರು ಶನಿವಾರ ಸಂಜೆ ಸಬ್‌ರಿಜಿಸ್ಟ್ರಾರ್ ಕಚೇರಿಯ ಹತ್ತಿರ 13 ಸಾವಿರ ಹಣವನ್ನು ಕೊಡುವಾಗ ಲೋಕಾ ಯುಕ್ತ ಎಸ್ಪಿ ಎಂ.ಎಸ್. ಕೌಲಾಪುರ,ಇನ್‌ಸ್ಪೆಕ್ಟರ್ ರಘುಪತಿ, ಎಸ್. ಆಂಜನೇಯ ನೇತೃತ್ವದ ತಂಡವು ದಾಳಿ ಮಾಡಿ ಪರಮೇಶ್ವರ್‌ ಅವ ರಿಂದ 40 ಸಾವಿರ ರೂಪಾಯಿ ನಗದು ಮತ್ತು ವಿವಿಧ ದಾಖಲೆಗ ಳನ್ನು ವಶಪಡಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

error: Content is protected !!