ಎಸ್.ಎಸ್.ಲೇ-ಔಟ್ `ಬಿ' ಬ್ಲಾಕ್, ರಿಂಗ್ ರಸ್ತೆಯಲ್ಲಿರುವ ಶ್ರೀ ಸ.ಸ. ಗೌರಮ್ಮಾಜಿ ಅಧ್ಯಾತ್ಮ ಮಂದಿರದಲ್ಲಿ ಶ್ರೀ ಗೌರಮ್ಮಾಜಿ ಮಹಾರಾಜರ 28ನೇ ಜ್ಞಾನಯಜ್ಞ ಸಪ್ತಾಹ ಮತ್ತು ಕಾರ್ತಿಕ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ನಾಡಿದ್ದು ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಕಾರ್ತಿಕೋತ್ಸವ
ನಗರದ ಎಂ.ಸಿ.ಸಿ. ಎ ಬ್ಲಾಕ್ನಲ್ಲಿ ರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಇದೇ ದಿನಾಂಕ 7ರ ಗುರುವಾರ ಸಂಜೆ 6 ಗಂಟೆಗೆ ಕಾರ್ತಿಕೋತ್ಸವ ನಡೆಯಲಿ ದೆ ಎಂದು ಶ್ರೀ ಸಾಯಿ ಟ್ರಸ್ಟ್ ಕಾರ್ಯದರ್ಶಿ ಎಂ. ಶಿವಪ್ಪ ತಿಳಿಸಿದ್ದಾರೆ.
ಭರಮಸಾಗರ ಮುಕ್ತಿಧಾಮ ಅಭಿವೃದ್ಧಿಗೆ ಸಹಕಾರಕ್ಕೆ ಮನವಿ
ಭರಮಸಾಗರ : ಸ್ಥಳೀಯ ಮುಕ್ತಿಧಾಮದಲ್ಲಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ಕೆಲವು ದಾನಿಗಳಿಂದ ಸಹಕಾರ ಪಡೆದು ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಆದರೆ ಮುಕ್ತಿಧಾಮ ಸುತ್ತಲೂ ಇರುವ ಜಾಗಕ್ಕೆ ಕಾಂಪೌಂಡ್ ಮಾಡಲು ಸಮಿತಿಯಲ್ಲಿ ಹಣದ ಕೊರತೆ ಇದೆ.
ಚುನಾವಣಾ ತೀರ್ಪನ್ನು ಕಾಂಗ್ರೆಸ್ ತಲೆಬಾಗಿ ಸ್ವೀಕರಿಸುತ್ತದೆ: ಡಿಬಿ
ಪಂಚ ರಾಜ್ಯಗಳ ಚುನಾವಣಾ ತೀರ್ಪನ್ನು ಕಾಂಗ್ರೆಸ್ ಪಕ್ಷ ತಲೆಬಾಗಿ ಸ್ವೀಕರಿಸುತ್ತದೆ ಎಂದು ಕೆಪಿಸಿಸಿ ವಕ್ತಾರ ಡಿ ಬಸವರಾಜ್ ತಿಳಿಸಿದ್ದಾರೆ.
ಹಳೇಕಡ್ಲೇಬಾಳು : ಸ.ಉ.ಶಾಲೆಯಲ್ಲಿ ಇಂದು ಚಿಗುರು ಕಾರ್ಯಕ್ರಮ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇಂದು ಮಧ್ಯಾಹ್ನ 3 ಗಂಟೆಗೆ ಹಳೇಕಡ್ಲೇಬಾಳು ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಗುರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ದೇವದಾಸಿಯರ ಪುನರ್ ಸಮೀಕ್ಷೆ ಕೈಗೊಳ್ಳಲು ಆಗ್ರಹ
ದೇವದಾಸಿಯರ ಮತ್ತು ಮಾಜಿ ದೇವದಾಸಿಯರ ಪುನರ್ ಸಮೀಕ್ಷೆ ಕಾರ್ಯಕ್ಕೆ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕು. ಮತ್ತವರ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಕಲ್ಪಿಸಬೇಕೆಂಬ ನಿರ್ಣಯಗಳನ್ನು ಹರಿಹರದಲ್ಲಿ ನಡೆದ ಮಹಿಳಾ ಒಕ್ಕೂಟದ ರಾಜ್ಯ ಸಮ್ಮೇಳನದ ಸಂದರ್ಭದಲ್ಲಿ ತೆಗೆದುಕೊಳ್ಳಲಾಯಿತು
ನಗರದಲ್ಲಿ ಇಂದು `ನಮ್ಮ ಹೆಮ್ಮೆಯ ಕನ್ನಡಿಗ’
ಕೋಟಕ್ ಸಂಸ್ಥೆ ವತಿಯಿಂದ ಗ್ರೀನ್ ಪಾರ್ಕ್ ಹೋಟೆಲ್ ಪಕ್ಕ ಸಂಕಮ್ನಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲ್ಲೂಕು ಘಟಕದ ಎಲ್ಲಾ ಪದಾಧಿಕಾರಿಗಳೆಲ್ಲರಿಗೂ `ನಾನು ಹೆಮ್ಮೆಯ ಕನ್ನಡಿಗ' ಎಂಬ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಇಂದು ಸಾಂಸ್ಕೃತಿಕ ಸಂಗೀತ
ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ದಾವಣಗೆರೆ ದಕ್ಷಿಣ ವಲಯದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ `ಮಕ್ಕಳಿಗಾಗಿ ಸಾಂಸ್ಕೃತಿಕ ಸಂಗೀತ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಇಂದು ವಕೀಲರ ದಿನಾಚರಣೆ
ಜಿಲ್ಲಾ ವಕೀಲರ ಸಂಘದಿಂದ ಇಂದು ಬೆಳಿಗ್ಗೆ 10.30ಕ್ಕೆ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ವಕೀಲರ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.
ನಗರದಲ್ಲಿ ಇಂದು `ಅಭಿರುಚಿ’ : ಇದು ಓದುಗರ ವೇದಿಕೆ
ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಲೈಬ್ರರಿ ಮತ್ತು ಇನ್ಫರ್ಮೇಷನ್ ವಿಭಾಗದ ಆಶ್ರಯದಲ್ಲಿ `ಅಭಿರುಚಿ' ಇದು ಓದುಗರ ವೇದಿಕೆ ಕಾರ್ಯಕ್ರಮವು ಇಂದು ಬೆಳಿಗ್ಗೆ 11.30 ಕ್ಕೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ನಗರದಲ್ಲಿ ಇಂದು ಓಶೋ ಧ್ಯಾನ ಶಿಬಿರ
ಓಶೋ ಸನ್ನಿಧಿ ಇನ್ಸೈಟ್ ಫೌಂಡೇ ಶನ್ ವತಿಯಿಂದ ಇಂದಿನಿಂದ ಇದೇ ದಿನಾಂಕ 7 ರವರೆಗೆ ಪ್ರತಿ ದಿನ ಬೆಳಿಗ್ಗೆ 6 ರಿಂದ 7.30 ರವರೆೆಗೆ ಆಲೂರು ಕನ್ವೆನ್ಷನ್ ಹಾಲ್ನಲ್ಲಿ ಓಶೋ ಧ್ಯಾನ ಶಿಬಿರ ನಡೆಯಲಿದೆ.
ನಗರಕ್ಕೆ ಇಂದು ಡಾ. ಅಂಬೇಡ್ಕರ್ ಜ್ಯೋತಿಯಾತ್ರೆ
ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ರವರ 67ನೇ ಮಹಾಪರಿನಿರ್ವಾಣ ಪ್ರಯುಕ್ತ ಅಸ್ಪೃಶ್ಯತಾ ನಿವಾರಣೆಗಾಗಿ ಹಮ್ಮಿಕೊಂಡಿರುವ ಅಂಬೇಡ್ಕರ್ ಜ್ಯೋತಿಯಾತ್ರೆ ಇಂದು ನಗರಕ್ಕೆ ಆಗಮಿಸಲಿದೆ.
ಮಲೇಬೆನ್ನೂರಿನಲ್ಲಿ ಮತ್ತೆ ನಾಲ್ವರನ್ನು ಗಾಯಗೊಳಿಸಿದ ಮುಷ್ಯ
ಮಲೇಬೆನ್ನೂರು : ಪಟ್ಟಣದಲ್ಲಿ ಸೋಮವಾರ ನಾಲ್ವರ ಮೇಲೆ ಮುಷ್ಯ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಜನರನ್ನು ಮತ್ತಷ್ಟು ಭಯಭೀತರನ್ನಾಗಿ ಮಾಡಿದೆ.
ಒತ್ತುವರಿ ನೆಲಸಮ
ದಾವಣಗೆರೆ ನಗರದ ಪಿ.ಬಿ.ರಸ್ತೆಯಿಂದ ಮಾಗನಹಳ್ಳಿ ರಸ್ತೆಯವರೆಗೆ ರಿಂಗ್ರೋಡ್ ನಿರ್ಮಾಣ ಮಾಡು ಉದ್ದೇಶದಿಂದ ಹೆಗಡೆ ನಗರದಲ್ಲಿ ವಾಸವಾಗಿದ್ದ ಒತ್ತುವರಿದಾರರ ತೆರವು ಕಾರ್ಯಾಚರಣೆ ಭಾನುವಾರ ಬಹುತೇಕ ಪೂರ್ಣಗೊಂಡಿತು. ಮನೆಗಳನ್ನು ಜೆಸಿಬಿಗಳಿಂದ ನೆಲಸಮ ಮಾಡಲಾಯಿತು.
ಹಳ್ಳಿಯ ಜನಜೀವನವೇ ನಿಜವಾದ ಪಠ್ಯಪುಸ್ತಕ
ಮಲೇಬೆನ್ನೂರು : ಹಳ್ಳಿಯ ಜೀವನ ನಿಜವಾದ ಪಠ್ಯವಾಗಿದ್ದು, ಪಠ್ಯದಲ್ಲಿ ಇರದ ನಿಜ ಘಟನೆ, ನಿಜ ಜೀವನ ಹಳ್ಳಿಗಳಲ್ಲಿ ನೀವು ನೋಡಬಹುದೆಂದು ಹರಿಹರದ ಎಸ್ಜೆವಿಪಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಎ.ಬಿ. ರಾಮಚಂದ್ರಪ್ಪ ವಿದ್ಯಾರ್ಥಿಗಳಿಗೆ ಹೇಳಿದರು.
ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ತರದಂತೆ ಆಗ್ರಹ
ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತಂದಲ್ಲಿ ಬಿಜೆಪಿಗೆ ಕಲಿಸಿದಂತೆ ಕಾಂಗ್ರೆಸ್ ಪಕ್ಷಕ್ಕೂ ಮುಂದಿನ ದಿನಗಳಲ್ಲಿ ಪಾಠ ಕಲಿಸಬೇಕಾಗುತ್ತದೆ ಎಂದು ಬಂಜಾರ, ಭೋವಿ, ಕೊರಚ, ಕೊರಮ ಹಾಗೂ ಇತರೆ ಸಮುದಾಯಗಳ ಮುಖಂಡರು ಎಚ್ಚರಿಸಿದ್ದಾರೆ.
ನಗರದಲ್ಲಿ ಇಂದು ಓಶೋ ಧ್ಯಾನ ಶಿಬಿರ
ಪಿ.ಜೆ. ಬಡಾವಣೆಯ 3 ನೇ ಮುಖ್ಯ ರಸ್ತೆ, 6 ನೇ ಅಡ್ಡರಸ್ತೆಯಲ್ಲಿನ ಓಶೋ ಸನ್ನಿಧಿ ಇನ್ಸೈಟ್ ಫೌಂಡೇಶನ್ ವತಿಯಿಂದ ಇಂದಿನಿಂದ ಇದೇ ದಿನಾಂಕ 7 ರವರೆಗೆ ಪ್ರತಿ ದಿನ ಬೆಳಿಗ್ಗ` 6 ರಿಂದ 7.30 ರವರೆೆಗೆ ಆಲೂರು ಕನ್ವೆನ್ಷನ್ ಹಾಲ್ನಲ್ಲಿ ಓಶೋ ಧ್ಯಾನ ಶಿಬಿರ ಏರ್ಪಡಿಸಲಾಗಿದೆ.
ಶಿವಮೂರ್ತಿ ಮುರುಘಾ ಶರಣರ ಸ್ಥಳಾಂತರಕ್ಕೆ ಆಗ್ರಹ
ಪೋಕ್ಸೋ ಪ್ರಕರಣದ ಅಡಿಯಲ್ಲಿ ಬಂಧಿತರಾಗಿ ಬಿಡುಗಡೆಯಾಗಿರುವ ಚಿತ್ರದುರ್ಗದ ಮುರುಘಾ ಶರಣರನ್ನು ಬೀದರ್ ಇಲ್ಲವೇ ಗುಲ್ಬರ್ಗಾ ಜಿಲ್ಲೆಗೆ ಸ್ಥಳಾಂತರಿಸುವಂತೆ ವಕೀಲ ಗುಮ್ಮನೂರು ಕೆ.ಎಂ. ಮಲ್ಲಿಕಾರ್ಜುನ್ ಒತ್ತಾಯಿಸಿದ್ದಾರೆ.
ಮಹಿಳೆಯರಿಂದ ಸಹಾಯಧನ – ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕಾಗಿ ಸಹಾಯಧನ ಮತ್ತು ಸಾಲ ಸೌಲಭ್ಯ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸದಾಶಿವ ಆಯೋಗದ ವರದಿ ಜಾರಿ ಮಾಡಿದರೆ ಕಾಂಗ್ರೆಸ್ ಪಕ್ಷಕ್ಕೆ ಜನರಿಂದ ತಕ್ಕ ಪಾಠ
ರಾಣಿಬೆನ್ನೂರು : ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬಾರದು ಎಂದು ಬಂಜಾರ ಸಮಾಜದ ಮುಖಂಡ ರಾಮಪ್ಪ ನಾಯ್ಕ ಹೇಳಿದರು.
ಏಕಲವ್ಯ ಪ್ರಶಸ್ತಿ ಅವಧಿ ವಿಸ್ತರಣೆ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಏಕಲವ್ಯ ಪ್ರಶಸ್ತಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿರುವ ರಾಜ್ಯದ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಡಿಸೆಂಬರ್ 5 ರವರೆಗೆ ವಿಸ್ತರಿಸಲಾಗಿದೆ
ವಿಪಕ್ಷಗಳ ತಿರಸ್ಕರಿಸಿದ ಮತದಾರ : ಶಿವಶಂಕರ್
ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ಘಡ ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವಿಗೆ ಜಿಲ್ಲಾ ಬಿಜೆಪಿ ಹರ್ಷ ವ್ಯಕ್ತಪಡಿಸುತ್ತದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಡಿಎಸ್ ಶಿವಶಂಕರ್ ತಿಳಿಸಿದ್ದಾರೆ.
ಮೂವರು ಬಾಲ, ಕಿಶೋರ ಕಾರ್ಮಿಕರ ಪತ್ತೆ
ನಗರದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಹಾಗೂ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ ಕುರಿತು ವಿವಿಧ ಅಂಗಡಿ, ಹೋಟೆಲ್, ಗ್ಯಾರೇಜ್ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿದ ಕಾರ್ಮಿಕ ಅಧಿಕಾರಿಗಳು ತಪಾಸಣೆ ನಡೆಸಿದರು.
ಕ್ರೀಡಾರತ್ನ ಪ್ರಶಸ್ತಿಗೆ ಅರ್ಜಿ; ಅವಧಿ ವಿಸ್ತರಣೆ
ಪ್ರಸಕ್ತ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ `ಜೀವಮಾನ ಸಾಧನೆ' ಹಾಗೂ `ಕರ್ನಾಟಕ ಕ್ರೀಡಾರತ್ನ' ಪ್ರಶಸ್ತಿಗಾಗಿ, ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿರುವ ರಾಜ್ಯದ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಇದೇ ದಿನಾಂಕ 8ರವರೆಗೆ ವಿಸ್ತರಿಸಲಾಗಿದೆ

ಭಾರತಕ್ಕೊಂದು ಶ್ರೇಷ್ಠ ಸಂವಿಧಾನ ರೂಪಿಸಿದ ಕೀರ್ತಿಯ ಸಿಂಹಪಾಲು ವಕೀಲ ವೃತ್ತಿಗೆ ಸಲ್ಲುತ್ತದೆ
ಹರಪನಹಳ್ಳಿ : ಜಗತ್ತಿನ ಬಹುತೇಕ ತತ್ವ, ಸಿದ್ಧಾಂತ, ಹಕ್ಕು ಮತ್ತು ಕರ್ತವ್ಯಗಳ ಆಳವಾದ ಅಧ್ಯಯನ ನಡೆಸಿ ಸ್ವತಂತ್ರ ಭಾರತಕ್ಕೊಂದು ಶ್ರೇಷ್ಠ ಸಂವಿಧಾನ ರೂಪಿಸಿದ ಕೀರ್ತಿಯ ಸಿಂಹಪಾಲು ವಕೀಲ ವೃತ್ತಿಗೆ ಸಲ್ಲುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶರಾದ ಎಂ.ಭಾರತಿ ಹೇಳಿದರು.

ಹೊನ್ನಾಳಿ : ಒತ್ತುವರಿಯಾಗಿದ್ದ ಸ್ಮಶಾನ ಜಾಗವನ್ನು ತೆರವುಗೊಳಿಸಿದ ಕಂದಾಯ ಅಧಿಕಾರಿಗಳು
ಹೊನ್ನಾಳಿ : ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಬೀರಗೊಂಡನಹಳ್ಳಿ ಗ್ರಾಮ ಪಂಚಾಯತಿಗೆ ಒಳಪಡುವ ಸದಾಶಿವಪುರ ಗ್ರಾಮದಲ್ಲಿ ಕಳೆದ 11 ವರ್ಷಗಳಿಂದ ಒತ್ತುವರಿಯಾಗಿದ್ದ ಸ್ಮಶಾನ ಜಾಗವನ್ನು ತಹಶೀಲ್ದಾರ್ ಒಳಗೊಂಡ ಅಧಿಕಾರಿಗಳ ತಂಡ ತೆರವುಗೊಳಿಸಿದೆ.

ದುಶ್ಚಟಗಳ ಜೊತೆಗೆ ಮೊಬೈಲ್ ಬಳಕೆಯಿಂದಲೂ ದೂರವಿರಿ
ಮಲೇಬೆನ್ನೂರು : ವಿದ್ಯಾರ್ಥಿಗಳು ದುಶ್ಚಟಗಳ ಜೊತೆಗೆ ಮೊಬೈಲ್ ಬಳಕೆಯಿಂ ದಲೂ ದೂರವಿದ್ದಷ್ಟು ಒಳ್ಳೆಯದೆಂದು ಮಲೇಬೆನ್ನೂರಿನ ಅಪೂರ್ವ ಆಸ್ಪತ್ರೆಯ ವೈದ್ಯ ಡಾ. ಅಪೂರ್ವ ಅಭಿಪ್ರಾಯಪಟ್ಟರು.

ಭಾರತದಲ್ಲಿ ಸಿರಿಧಾನ್ಯಗಳ ಮೌಲ್ಯವರ್ಧನೆ ತೀರಾ ಕಡಿಮೆ
ನಗರದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ರಾಜಸ್ಥಾನದ ಜೈಪುರದ ಚೌಧರಿ ಚರಣ್ ಸಿಂಗ್ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸಿರಿಧಾನ್ಯಗಳ ಮೌಲ್ಯ ವರ್ಧನೆ, ಪ್ಯಾಕಿಂಗ್, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆಯ ಬಗ್ಗೆ ಮೂರು ದಿನಗಳ ಎರಡು ತರಬೇತಿಯನ್ನು ಗ್ರಾಮೀಣ ಮಹಿಳೆಯರಿಗೆ ಹಮ್ಮಿಕೊಳ್ಳಲಾಗಿತ್ತು.

ತುರ್ಚಘಟ್ಟದಲ್ಲಿ ಕಸಾಪ ಶಾಲಾ-ಕಾಲೇಜು ಅಂಗಳದಲ್ಲಿ ದತ್ತಿ ಉಪನ್ಯಾಸ
ಹಿರಿಯ ನಾಗರಿಕರ ಸಹಾಯವಾಣಿ (ದಾವಣಗೆರೆ) ಇವರ ಸಂಯುಕ್ತ ಆಶ್ರಯದಲ್ಲಿ ‘ಶಾಲಾ-ಕಾಲೇಜು ಅಂಗಳದಲ್ಲಿ ದತ್ತಿ ಉಪನ್ಯಾಸ’ ಹಾಗೂ ‘ಮಕ್ಕಳ ದಿನಾಚರಣೆ’ ಪ್ರಯುಕ್ತ ಆಟೋಟ ಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ತುರ್ಚಘಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಬಿಜೆಪಿ ಮೂಲ ಕಾರ್ಯಕರ್ತರ ಸಭೆ; ಸಮಿತಿ ರಚನೆ
ಜಗಳೂರು : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಮೂಲ ಕಾರ್ಯಕರ್ತರ ಸಭೆ ನಡೆಯಿತು, ಸಭೆಯಲ್ಲಿ ಹುಲಿಕುಂಟ ಶೆಟ್ಟಿ, ಮಂಜುನಾಥ ಸಾಹುಕಾರ್, ಓ. ಬಾಬುರೆಡ್ಡಿ ಕೃಷ್ಣಮೂರ್ತಿ, ಪುರುಷೋತ್ತಮ ನಾಯಕ್, ಹೆಚ್.ಎಂ.ನಾಗರಾಜ, ಬಿ.ಎಸ್. ಪ್ರಕಾಶ್, ಕೆ.ಎಂ.ನಾಗೇಂದ್ರಯ್ಯ, ಇ.ಎನ್.ಪ್ರಕಾಶ್, ಲೋಕಣ್ಣ, ಕಲ್ಲಪ್ಪ ಕೆ.ಟಿ., ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.

ವಲಯ ಮಟ್ಟಕ್ಕೆ ರಾಘವೇಂದ್ರ ಪಿಯು ಕಾಲೇಜ್ ವಿದ್ಯಾರ್ಥಿಗಳು
ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ನಗರದ ರಾಘವೇಂದ್ರ ಹೈಟೆಕ್ ಪಿಯು ಕಾಲೇಜು ವಿದ್ಯಾರ್ಥಿಗಳು ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅಂತರ ಕಾಲೇಜು ಚೆಸ್ – ಯೋಗ ಪಂದ್ಯಾವಳಿ
ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿ ಸಾಜಿದ್ ಬಳ್ಳೂರು ಚೆಸ್ ಸ್ಪರ್ಧೆಯಲ್ಲಿ ಹಾಗೂ ಸೃಷ್ಟಿ ಜಿ.ಲಕ್ಕುಂಡಿ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಚೆನ್ನೈನಲ್ಲಿ ನಡೆಯುವ ಸೌತ್ವೆಸ್ಟ್ ಝೋನ್ ಅಂತರ ವಿಶ್ವವಿದ್ಯಾನಿಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇ-ಜನ್ಮ ತಂತ್ರಾಂಶದಲ್ಲಿ ಜನನ-ಮರಣ ನೋಂದಣಿ ಕಡ್ಡಾಯ
ಜಿಲ್ಲೆಯಲ್ಲಿನ ಜನನ ಹಾಗೂ ಮರಣ ನೋಂದಣಿಯನ್ನು ಕಡ್ಡಾಯ ವಾಗಿ ಇ-ಜನ್ಮ ತಂತ್ರಾಂಶದಲ್ಲಿ ದಾಖಲಿಸಬೇಕು, ನೊಂದಣಿಗೆ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಅಭಿಯಾನದಡಿ ಒಂದು ದಿನ ನಿಗದಿ ಮಾಡಿ ನೊಂದಣಿಗೆ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.

ಸರ್ವರ ದುಃಖ ನಿವಾರಿಸಿ, ಆನಂದದ ಪಯಣ ಮಾಡಿದ ‘ಜೆಕೆ’
20ನೇ ಶತಮಾನದ ದಾರ್ಶನಿಕ, ಚಿಂತಕ ಜಿದ್ದು ಕೃಷ್ಣಮೂರ್ತಿಯವರು ತಮ್ಮ ತ್ತೊಂಭತ್ತೊಂದುವರೆ ವರ್ಷದ ಜೀವನದಲ್ಲಿ ಸರ್ವರ ದುಃಖ ನಿವಾರಿಸಿ ಆನಂದದ ಪಯಣವ ತಾವೂ ಮಾಡಿ, ಜಗತ್ತಿಗೂ ಮಾರ್ಗದರ್ಶಕರಾದರು ಎಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಅಭಿಪ್ರಾಯಿಸಿದರು.

ನಿಟ್ಟುವಳ್ಳಿಯ ಸರ್ಕಾರಿ ಶಾಲೆಗೆ ಡೆಸ್ಕ್ ಕೊಡುಗೆ
ನಗರದ ಇ.ಎಸ್.ಐ ಆಸ್ಪತ್ರೆ ರಸ್ತೆಯಲ್ಲಿ ಇರುವ ನಿಟ್ಟುವಳ್ಳಿ ಪ್ರಾಥಮಿಕ, ಪ್ರೌಢಶಾಲೆಗೆ ಇನ್ ಸೈಟ್ಸ್ ಐಎಎಸ್ ಸಂಸ್ಥೆ ವಿನಯ್ ಮಾರ್ಗ ಟ್ರಸ್ಟ್ನ ವಿನಯಕುಮಾರ್ ಅಭಿಮಾನಿ ಬಳಗದ ವತಿಯಿಂದ ಶಾಲಾ ಮಕ್ಕಳಿಗೆ ಡೆಸ್ಕ್ ಕೊಡುಗೆ ನೀಡಲಾಯಿತು.

ಗಾಯಾಳುಗಳಿಗೆ ಶಾಸಕ ಬಸವಂತಪ್ಪ ನೆರವು
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದ ಶಿರಮ ಗೊಂಡನಹಳ್ಳಿ ಬ್ರಿಡ್ಜ್ ಬಳಿ ಸೋಮವಾರ ಸಂಜೆ ರಸ್ತೆ ಅಪಘಾತ ಸಂಭವಿಸಿದ್ದು, ಗಾಯಗೊಂಡವರನ್ನು ಶಾಸಕ ಕೆ.ಎಸ್.ಬಸವಂತಪ್ಪ ಅವರು ಉಚಿತ ಆಂಬ್ಯುಲೆನ್ಸ್ ಮಾಡಿಸಿ, ಆಸ್ಪತ್ರೆಗೆ ಸಾಗಿಸಲು ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

ಪವರ್ಗ್ರಿಡ್ ರೂ.1.63 ಕೋಟಿ ಸಿಎಸ್ಆರ್ ನಿಧಿಯಡಿ ಬಿಸಿ ನೀರು ಪೂರೈಕೆಗೆ ಜಿಲ್ಲಾಧಿಕಾರಿಗಳೊಂದಿಗೆ ಒಡಂಬಡಿಕೆ
ರಾಜ್ಯ ಮಹಿಳಾ ಹಾಸ್ಟೆಲ್, ಇಎಸ್ಐ ಆಸ್ಪತ್ತೆಯಲ್ಲಿ ಬಿಸಿ ನೀರು ಪೂರೈಕೆ ಮಾಡಲು 1.63 ಕೋಟಿ ರೂ. ಕಾಮಗಾರಿಗೆ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹಾಗೂ ಪವರ್ ಗ್ರಿಡ್ ಕಂಪನಿಯ ಜನರಲ್ ಮ್ಯಾನೇಜರ್ ಹರೀಶ್ ನಾಯರ್ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಒಡಂಬಡಿಕೆಗೆ ಸಹಿ ಹಾಕಿದರು.

ಉಕ್ಕಡಗಾತ್ರಿಯಲ್ಲಿ ಪ್ರತಿಭಾ ಪುರಸ್ಕಾರ
ಮಲೇಬೆನ್ನೂರು : ಉಕ್ಕಡಗಾತ್ರಿಯಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಗ್ರಾಮದ ಯುವಕರಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಯಲ್ಲಿ ಶೇ.80 ರಷ್ಟು ಅಂಕ ತೆಗೆದ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಸಂವಿಧಾನ ಪೀಠಿಕೆ ಓದುವ ಮೂಲಕ ಉದ್ಘಾಟಿಸಲಾಯಿತು.

ಕರಾಟೆ : ಈಗಲ್ ಫಿಟ್ನೆಸ್ನ ವಿದ್ಯಾರ್ಥಿಗಳಿಗೆ ಪ್ರಶಸ್ತಿ
ಮಹಾತ್ಮ ಗಾಂಧಿ ಸ್ಮರಣಾರ್ಥ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಫ್-2023 ಶಿವಮೊಗ್ಗದ ಇಂಡೋರ್ ಸ್ಟೇಡಿಯಂನಲ್ಲಿ ಕಳೆದ ವಾರ ನಡೆಯಿತು. ಈಗಲ್ ಫಿಟ್ನೆಸ್ ಮತ್ತು ಮಾರ್ಷಲ್ ಆರ್ಟ್ಸ್ ಸೆಂಟರ್ನ ವೆಂಕಿ ಸೆನ್ಸಾಯ್ ಇವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಗೆ ಭಾಜನರಾದರು.

ಏತ ನೀರಾವರಿ ಯೋಜನೆಯಡಿ ಶ್ರೀರಾಮನ ಕೆರೆಗೆ ನೀರು
ಹೊನ್ನಾಳಿ : ಎಂ.ಹನುಮನಹಳ್ಳಿ, ಸಿಂಗಟಗೆರೆ ಸಮೀಪದ ಕೆರೆಗೆ ಏತ ನೀರಾವರಿ ಯೋಜನೆಯಡಿ ನೀರು ತುಂಬಿಸಿದೆ. ಈ ಕೆರೆಗೆ ಶಾಸಕ ಡಿ.ಜಿ.ಶಾಂತನಗೌಡ ಗಂಗಾ ಪೂಜೆ ಸಲ್ಲಿಸಿ, ಹಲವಾರು ಮುಖಂಡರೊಂದಿಗೆ ಬಾಗಿನ ಅರ್ಪಿಸಿದರು.

ಮಾತೃಭಾಷೆಯನ್ನು ಪ್ರೀತಿಸಿ, ಬೆಳೆಸಬೇಕು : ಡಾ. ನೀತಾ
ಆವರಗೆರೆಯ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಶ್ರೀ ಗುರು ಪಂಚಾಕ್ಷರಿ ಗವಾಯಿ ಮೆಮೋರಿಯಲ್ ಕಾಂಪೋಜಿಟ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಸಂಭ್ರಮ ನಡೆಯಿತು.

ಫ್ರೆಂಡ್ಸ್ ಬೆಂಗಳೂರು ತಂಡ ಪ್ರಥಮ ಸ್ಥಾನ ಇಜಾನ್ ಸ್ಫೋರ್ಟ್ಸ್ ಉಡುಪಿ ರನ್ನರ್ ಆಫ್
ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪನವರ ಸವಿ ನೆನಪಿನ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕ್ರಿಕೆಟ್ ಹಬ್ಬಕ್ಕೆ ಸೋಮವಾರ ಬೆಳಗಿನ ಜಾವ 3 ಗಂಟೆಗೆ ತೆರೆ ಬಿದ್ದಿತ್ತು.

1015.6 ಎಂ.ಟಿ ಸರಕು ಸಾಗಣೆ ಮಾಡಿದ ಭಾರತೀಯ ರೈಲ್ವೆ
ಹುಬ್ಬಳ್ಳಿ : ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸರಕು ಸಾಗಣೆ 36.9 ಮಿಲಿಯನ್ ಟನ್ ಹೆಚ್ಚಾಗಿದೆ ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ತಿಳಿಸಿದ್ದಾರೆ.

ಮಲೇಬೆನ್ನೂರಿನಲ್ಲಿ ಸಂಭ್ರಮದ ಶೋಭಾಯಾತ್ರೆ
ಮಲೇಬೆನ್ನೂರು : ಇಲ್ಲಿನ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಸಂಸ್ಥೆ ವತಿಯಿಂದ ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರ 536ನೇ ಜಯಂತ್ಯೋತ್ಸವದ ಅಂಗವಾಗಿ ಭಾನುವಾರ ಕನಕದಾಸರ ಪ್ರತಿಮೆಯ ಶೋಭಾಯಾತ್ರೆ ಸಂಭ್ರಮದಿಂದ ಜರುಗಿತು.

ಮಠಗಳು ಸತ್ಯ-ಅಸತ್ಯದ ನಡುವಿನ ವ್ಯತ್ಯಾಸ ತಿಳಿಸುವ ಶಕ್ತಿ ಕೇಂದ್ರಗಳು
ಹರಪನಹಳ್ಳಿ : ಜನರಿಗೆ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವುದರ ಜೊತೆಗೆ ಸತ್ಯ ಮತ್ತು ಅಸತ್ಯಗಳ ನಡುವಿನ ವ್ಯತ್ಯಾಸಗಳನ್ನು ಹಾಗೂ ಒಳಿತು ಮತ್ತು ಕೆಡಕುಗಳ ನಡುವಿನ ಭಿನ್ನತೆಯನ್ನು ತಿಳಿಸುವ ಶಕ್ತಿಕೇಂದ್ರಗಳು ಮಠಗಳಾಗಿವೆ ಎಂದು ಉಜ್ಜಿನಿ ಪೀಠದ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ರಾಜರಾಜೇಶ್ವರಿ ಅಂಗಳದಲ್ಲಿ ಅರಳಿದ ಹೂಗಳ ಚೆಲುವು
ಮಲೇಬೆನ್ನೂರು : ಪಟ್ಟಣದ ಒಡೆಯರ ಬಸವಾಪುರ ಗ್ರಾ.ಪಂ. ವ್ಯಾಪ್ತಿಯ ಪಟೇಲ್ ಬಸಪ್ಪ ಎಜುಕೇಶನ್ ಅಸೋಸಿಯೇಶನ್ನ ರಾಜ ರಾಜೇಶ್ವರಿ ವಿದ್ಯಾ ಸಂಸ್ಥೆಯ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳ ಪ್ರತಿಭಾ ಶಕ್ತಿ, ಕ್ರಿಯಾತ್ಮಕ ಶಕ್ತಿ , ಕಲ್ಪನಾ ಶಕ್ತಿಯ ಬೆಳವಣಿಗೆಗೆ ಪೂರಕವಾದ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು.

ಭಕ್ತಿ ,ಶ್ರದ್ಧೆ ,ಕಾಯಕದ ಮೂಲಕ ಆದರ್ಶ ಸಮಾಜ
ಚನ್ನಗಿ :ಆಧುನಿಕತೆ ಬೆಳೆದಂತೆ ನಮ್ಮೊಳಗಿನ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಭಕ್ತಿ, ಶ್ರದ್ಧೆ, ಕಾಯಕ ತತ್ವಗಳಲ್ಲಿನ ಉತ್ತಮ ಗುಣ ಮತ್ತು ಮೌಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ಆದರ್ಶ, ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಮುಂದಾಗುವಂತೆ ಎಲ್.ಜಿ.ಮಧುಕುಮಾರ್ ಕರೆ ನೀಡಿದರು.

ತಾಯಿಗೆ ಕೊಡುವ ಗೌರವ ಭಾಷೆಗೂ ಕೊಡಬೇಕು
ಹೊನ್ನಾಳಿ : ಮರಗಳು ಎಷ್ಟೇ ದೊಡ್ಡದಾಗಿ ಹರಡಿದ್ದರೂ, ಅದರ ಬೇರುಗಳು ತನ್ನ ಮೂಲವನ್ನು ಗಟ್ಟಿಯಾಗಿ ಹಿಡಿದಿರುತ್ತವೆ. ಅದರಂತೆ ನಾವು ನಮ್ಮ ಮಾತೃ ಭಾಷೆಯನ್ನು ಮರೆಯಬಾರದು ಎಂದು ಹಿರಿಯ ಸಾಹಿತಿ ಯು. ಎನ್. ಸಂಗನಾಳ ಮಠ ಅವರು ಹೇಳಿದರು

ಲಾನ್ ಟೆನ್ನಿಸ್: ರಾಷ್ಟ್ರಮಟ್ಟಕ್ಕೆ ಈಶ್ವರಮ್ಮ ಶಾಲಾ ವಿದ್ಯಾರ್ಥಿಗಳು ಆಯ್ಕೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಆಯೋಜಿಸಿದ್ದ ರಾಜ್ಯ ಮಟ್ಟದ ಲಾನ್ ಟೆನ್ನಿಸ್ ಕ್ರೀಡಾಕೂಟದಲ್ಲಿ ನಗರದ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕನ್ನಡ ಸಾಹಿತ್ಯದಲ್ಲಿ 12ನೇ ಶತಮಾನ ಪ್ರಮುಖ ಘಟ್ಟ
ಕದಳಿ ಮಹಿಳಾ ವೇದಿಕೆ ತಾಲ್ಲೂಕು ಘಟಕದಿಂದ 148 ನೇ ಕಮ್ಮಟದಲ್ಲಿ ಲಿಂ|| ಷಡಾಕ್ಷರಪ್ಪ ಮತ್ತು ಶ್ರೀಮತಿ ಬಿ. ಅಂಜಿನಮ್ಮ ಕಲಪನಹಳ್ಳಿ ದತ್ತಿ, ಕನ್ನಡ ರಾಜ್ಯೋತ್ಸವ, ಶರಣ ಕೋಲ ಶಾಂತಯ್ಯನವರ ಜಯಂತಿಯನ್ನು ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು.

ಲಿಂಗತ್ವ ದೌರ್ಜನ್ಯ ಅಭಿಯಾನ ಜಾಗೃತಿ ಜಾಥಾ
ಲಿಂಗತ್ವ ದೌರ್ಜನ್ಯ ಅಭಿಯಾನ ಕುರಿತ ಜಾಗೃತಿ ಜಾಥಾಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ, ಅವರು ಮಾತನಾಡಿದರು.