ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಪ್ರಯುಕ್ತ ದೇವಸ್ಥಾನದ ಮುಂಭಾಗದಲ್ಲಿ ಇಂದಿನಿಂದ ಬರುವ ಏಪ್ರಿಲ್ 5ರವರೆಗೆ ಪ್ರತಿದಿನ ರಾತ್ರಿ 8 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ನಗರದಲ್ಲಿ ಇಂದು ಮಜ್ಜಿಗೆ ವಿತರಣೆ
ಕರುಣಾ ಜೀವ ಕಲ್ಯಾಣ ಟ್ರಸ್ಟ್ನಿಂದ ಒಂದು ತಿಂಗಳು ನಡೆಸುತ್ತಿರುವ ಮಜ್ಜಿಗೆ ವಿತ ರಣಾ ಕಾರ್ಯಕ್ರಮಕ್ಕೆ ಡಾ. ಎಸ್. ಮೃತ್ಯುಂಜಯ (ಮಕ್ಕಳ ತಜ್ಞರು) ಅವರು ಇಂದಿನ ದಾನಿಗಳಾಗಿದ್ದಾರೆ.
ಹಿರೇಹಾಲಿವಾಣದ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಕ್ಕೆ ಆಗ್ರಹ
ಹರಿಹರ ತಾಲ್ಲೂಕಿನ ಹಿರೇಹಾಲಿ ವಾಣದಲ್ಲಿ ಏ.1ರಿಂದ ಶ್ರೀ ಏಳೂರು ಕರಿಯಮ್ಮ ದೇವಿಯ ಜಾತ್ರೆ ನಡೆಸಲು ಕೆಲವರು ಮುಂದಾ ಗಿದ್ದು, ಜಾತ್ರೆ ವೇಳೆ ಪ್ರಾಣಿ ಬಲಿ ನಡೆಸುವುದಾಗಿಯೂ ಹೇಳಿದ್ದಾರೆ.
ಏ.2 ರಿಂದ ಲಕ್ಕಶೆಟ್ಟಿಹಳ್ಳಿ ಶ್ರೀ ಕಾಳಿಕಾದೇವಿ ಜಾತ್ರೆ
ಹರಿಹರ : ಏಪ್ರಿಲ್ 2 ರಿಂದ 5ರವರೆಗೆ ಗ್ರಾಮದೇವತೆ ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಹರಿಹರ ತಾಲ್ಲೂಕಿನ ಲಕ್ಕಶೆಟ್ಟಿಹಳ್ಳಿ ಶ್ರೀ ಕಾಳಿಕಾದೇವಿ ಸೇವಾ ಸಮಿತಿ ತಿಳಿಸಿದೆ.
ಸಿ.ಟಿ. ರವಿ ಕ್ಷಮೆ ಯಾಚನೆಗೆ ಭೋವಿ ಸಮಾಜದ ಆಗ್ರಹ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿಯವರ ತಾಯಿಯ ಬಗ್ಗೆ ಬಿಜೆಪಿಯ ಸಿ.ಟಿ. ರವಿ ಅವಹೇಳಕಾರಿಯಾಗಿ ಮಾತನಾಡಿರುವುದು ಭೋವಿ ಸಮಾಜಕ್ಕೆ ನೋವುಂಟು ಮಾಡಿದೆ.
ಹರಿಹರ : ಮಾವನ ಕೊಂದ ಸೊಸೆಗೆ 4 ವರ್ಷ ಸಾಧಾರಣ ಕಾರಾಗೃಹ ಶಿಕ್ಷೆ
ಮಾವ (ಪತಿಯ ತಂದೆ)ನನ್ನು ಕೊಂದ ಆರೋಪದ ಹಿನ್ನೆಲೆಯಲ್ಲಿ ಜ್ಯೋತಿ (32) ಎಂಬಾಕೆಗೆ ಇಲ್ಲಿನ ಘನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷ ಸಾಧಾರಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಅಪ್ರಾಪ್ತ ಮಗನ ಮೇಲೆ ಹಲ್ಲೆ ಮಾಡಿದ ತಂದೆಗೆ ಶಿಕ್ಷೆ
ತನ್ನ ಅಪ್ರಾಪ್ತ ಮಗನಿಗೆ ಕಬ್ಬಿಣದ ಪೈಪ್ನಿಂದ ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿ ಅನಿಲ್ ಕುಮಾರ್ (45)ಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ಸಾವಿರ ರೂ. ದಂಡ ತಪ್ಪಿದಲ್ಲಿ 3 ತಿಂಗಳು ಕಾರಾಗೃಹ ಶಿಕ್ಷೆ ವಿಧಿಸಿದೆ.
ದೊಣೆಹಳ್ಳಿಯಲ್ಲಿ ಇಂದು ಸರ್ವ ಶರಣರ `ಬಹುತ್ವ’ ಸಮಾವೇಶ
ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಶ್ರೀ ಶರಣ ಬಸವೇಶ್ವರ ದಾಸೋಹ ಮಠದಲ್ಲಿ ದಾಸೋಹ ಸಂಸ್ಕೃತಿ ಉತ್ಸವದ ಅಂಗವಾಗಿ ಇಂದು ಬೆಳಿಗ್ಗೆ 10.30 ಕ್ಕೆ ಸರ್ವ ಶರಣರ`ಬಹುತ್ವ' ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಸಿದ್ಧಗಂಗಾ ವಿದ್ಯಾಸಂಸ್ಥೆಯಿಂದ ಏ.7ರಂದು ಕ್ವಿಜ್
ಸಿದ್ಧಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕ ಎಂ.ಎಸ್. ಶಿವಣ್ಣನವರ ಗೌರವಾರ್ಥ ಏಪ್ರಿಲ್ 7ರಂದು ನಗರದ ಸಿದ್ಧಗಂಗಾ ಶಾಲೆಯಲ್ಲಿ ರಾಜ್ಯ ಮಟ್ಟದ `ಎಂಎಸ್ಎಸ್-2024 ಕ್ವಿಜ್' ಏರ್ಪಡಿಸಲಾಗಿದೆ.
ನಗರದಲ್ಲಿಂದು ಯುಗಾದಿ ಕವಿಗೋಷ್ಠಿ
ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಕರ್ನಾಟಕ ವಚನ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಸ್ಫೂರ್ತಿ ಪ್ರಕಾಶನ ತೆಲಿಗೆ ಇವರುಗಳ ಸಂಯುಕ್ತಾಶ್ರಯದಲ್ಲಿ ಯುಗಾದಿ ಕವಿಗೋಷ್ಠಿ - ಕ್ರೋಧಿ ನಾಮ ಸಂವತ್ಸರದ ಸ್ವಾಗತ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 10 ಗಂಟೆಗೆ ರೋಟರಿ ಬಾಲಭವನದಲ್ಲಿ ಏರ್ಪಡಿಸಲಾಗಿದೆ.
ಹರಿಹರ : ಶಿವ ಸಂಚಾರ ಕಾರ್ಯಕ್ರಮ
ಹರಿಹರ : ನಗರದ ಸಿಟಿ ಫ್ಯಾಮಿಲಿ ಸೆಂಟರ್ ವತಿಯಿಂದ ಸಾಧು ವೀರಶೈವ ಸಮಾಜದ ಆಶ್ರಯದಲ್ಲಿ ಏಪ್ರಿಲ್ 1ರಿಂದ 3ರವರೆಗೆ ಶಿವ ಸಂಚಾರ-23 ಕಾರ್ಯಕ್ರಮ ನಡೆಯಲಿವೆ.
ರಾಣೇಬೆನ್ನೂರಿನಲ್ಲಿ ನಾಡಿದ್ದು ಮಾಜಿ ಸಚಿವ ಆರ್. ಶಂಕರ್ ಅಭಿಮಾನಿಗಳ ಸಭೆ
ರಾಣೇಬೆನ್ನೂರು : ಮಾಜಿ ಸಚಿವ ಆರ್. ಶಂಕರ್ ಅವರ ಮುಂದಿನ ರಾಜಕೀಯ ಭವಿಷ್ಯ ಯಾವ ಪಕ್ಷದಲ್ಲಿ ಕಂಡುಕೊಳ್ಳಬೇಕು ಯಾವ ಪಕ್ಷ ಅವರಿಗೆ ಶ್ರೇಯಸ್ಸು ತರಬಹುದು
ನಗರದಲ್ಲಿ ಇಂದು ದಾವಣಗೆರೆ ಗೃಹಿಣಿ ಸ್ಪರ್ಧೆ
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಮಹಿಳಾ ವಿಭಾಗದಿಂದ `ದಾವಣಗೆರೆ ಗೃಹಿಣಿ ಸ್ಪರ್ಧೆ-2024'ಯು ಇಂದು ಬೆಳಿಗ್ಗೆ 10-30ಕ್ಕೆ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ನಡೆಯಲಿದೆ.
ದೈವಜ್ಞ ಬ್ರಾಹ್ಮಣ ಸಮಾಜದ ವಟುಗಳಿಗೆ `ಬ್ರಹ್ಮೋಪದೇಶ’
ಸೋಂದಾ ಕ್ಷೇತ್ರದ ಶ್ರೀ ಸೋದೆ ವಾದಿರಾಜ ಮಠದಲ್ಲಿ ಏಪ್ರಿಲ್ 3 ರಂದು ಶ್ರೀ ಮಠದ ಮುಖ್ಯ ಶಿಷ್ಯರಾದ ದೈವಜ್ಞ ಬ್ರಾಹ್ಮಣ ವಟುಗಳಿಗೆ ತಪ್ತ ಮುದ್ರಾಧಾರಣ ಪುರಸ್ಪರ `ಬ್ರಹ್ಮೋಪದೇಶ'ವನ್ನು ಉಚಿತವಾಗಿ ಹಮ್ಮಿಕೊಳ್ಳಲಾಗಿದೆ.
ಯೋಗ ಸಾಧಕಿ ಲಾವಣ್ಯ ಶ್ರೀಧರ್ಗೆ ‘ಅಹಲ್ಯಾಬಾಯಿ ಹೋಳ್ಕರ್’ ಪ್ರಶಸ್ತಿ
ರಾಜ್ಯ ಮತ್ತು ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ನಗರದ ಎಸ್ಎಎಸ್ಎಸ್ ಯೋಗ ಕೇಂದ್ರದ ಎಸ್.ಪಿ.ಲಾವಣ್ಯ ಶ್ರೀಧರ್ ಅವರಿಗೆ ‘ಅಹಲ್ಯಾಬಾಯಿ ಹೋಳ್ಕರ್’ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಸಾಹಿತಿ ಸುಕನ್ಯಾ ತ್ಯಾವಣಿಗೆ ಅವರಿಗೆ `ಶಿವಶರಣೆ ನೀಲಾಂಬಿಕೆ ರಾಜ್ಯ’ ಪ್ರಶಸ್ತಿ
ವಿಶ್ವ ಕನ್ನಡ ಪ್ರಥಮ ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಪ್ರದಾನ ಮಾಡುವ ಜ್ಞಾನಯೋಗಿ ಶಿವಶರಣೆ ನೀಲಾಂಬಿಕೆ ಪ್ರಶಸ್ತಿಗೆ 26 ಮಂದಿ ಮಹಿಳಾ ಸಾಧಕಿಯರು ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಈ. ರವೀಶ್ ತಿಳಿಸಿದ್ದಾರೆ.
ಎಂ.ಬಿ.ಎ. ಪರೀಕ್ಷೆಯಲ್ಲಿ ಕೆ. ಸಿರಿಲಕ್ಷ್ಮಿ ಅವರಿಗೆ ರ್ಯಾಂಕ್
ಕಳೆದ ಜುಲೈ 2023ರಲ್ಲಿ ನಡೆದ ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಯೂನಿವರ್ಸಿಟಿಯ ಎಂ.ಬಿ.ಎ ಪರೀಕ್ಷೆಯಲ್ಲಿ ನಗರದ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಎಂ.ಬಿ.ಎ ಕಾಲೇಜಿನ ಕು. ಕೆ.ಸಿರಿಲಕ್ಷ್ಮಿ ಅವರು 6ನೇ ರ್ಯಾಂಕ್ ಪಡೆದಿದ್ದಾರೆ.
ನಾಳೆ ಬಸವನಾಳು ಶ್ರೀ ಬಸವೇಶ್ವರ ರಥೋತ್ಸವ, ಇಂದು ಕಂಕಣಧಾರಣೆ
ತಾಲ್ಲೂಕಿನ ಬಸವನಾಳು ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ನಾಳೆ ದಿನಾಂಕ 29 ರಂದು ಸಂಜೆ ಕಂಕಣಧಾರಣೆ, ಕಳಸಾರೋಹಣ, ನಾಡಿದ್ದು ದಿನಾಂಕ 30 ರಂದು ಶನಿವಾರ ಸಂಜೆ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವ ಜರುಗಲಿದೆ.
ಭದ್ರಾ ಕಾಲುವೆ ಬಳಿ ನಿಷೇಧಾಜ್ಞೆ
ಭದ್ರಾ ಜಲಾಶಯದಿಂದ ಬಲದಂಡೆ ಕಾಲುವೆಗೆ ನೀರು ಬಿಡಲಾಗಿದ್ದು ಕೊನೆ ಹಂತದ ರೈತರಿಗೆ ನೀರು ತಲುಪಿಸಲು ಅನಧಿಕೃತ ಪಂಪ್ಸೆಟ್ ತೆರವು ಮಾಡಲಾಗುತ್ತಿದೆ.
ಇಂದಿನಿಂದ ಸೂಳೆಕೆರೆ ಹಳ್ಳಕ್ಕೆ ನೀರು ಬಿಡುಗಡೆ
ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾ. 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಚಿತ್ರದುರ್ಗದಿಂದ ಕಾರಜೋಳ ಸ್ಪರ್ಧೆ
ಚಿತ್ರದುರ್ಗ ಲೋಕಸಭಾ ಕ್ಷೇತ್ರ ದಿಂದ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪರ್ಧಿಸ ಲಿದ್ದಾರೆ ಎಂದು ಬಿಜೆಪಿ ಘೋಷಿ ಸಿದೆ. ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.
ನಗರದಲ್ಲಿ ಇಂದು ನ್ಯಾಯವಾದಿಗಳಿಗೆ ನ್ಯಾಯ ವಿಜ್ಞಾನ ಕಾರ್ಯಕ್ರಮ
ಜಿಲ್ಲಾ ವಕೀಲರ ಸಂಘದಿಂದ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಉಪನ್ಯಾಸ ಮಾಲಿಕೆ-7 ನ್ಯಾಯವಾದಿಗಳಿಗೆ ನ್ಯಾಯ ವಿಜ್ಞಾನ ಕಾರ್ಯಕ್ರಮವನ್ನು ಇಂದು ಮಧ್ಯಾಹ್ನ 2.30ಕ್ಕೆ ಆಯೋಜಿಸಲಾಗಿದೆ.
ಸಚಿವ ತಂಗಡಗಿ ಹೇಳಿಕೆಗೆ ಡಿ. ಬಸವರಾಜ್ ಸಮರ್ಥನೆ
ಸಚಿವ ಶಿವರಾಜ್ ತಂಗಡಗಿಯವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನೀಡಿರುವ ಹೇಳಿಕೆ ಸರಿಯಾಗಿದೆ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಸಮರ್ಥಿಸಿಕೊಂಡಿದ್ದಾರೆ.
ದೊಣೆಹಳ್ಳಿ ದಾಸೋಹ ಸಂಸ್ಕೃತಿ ಉತ್ಸವದಲ್ಲಿ ಇಂದು
ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಗ್ರಾಮದ ಶ್ರೀ ಶರಣ ಬಸವೇಶ್ವರ ದಾಸೋಹ ಮಠದ ವತಿಯಿಂದ ನಡೆಯುತ್ತಿರುವ ದಾಸೋಹ ಸಂಸ್ಕೃತಿ ಉತ್ಸವದಲ್ಲಿ ಇಂದು ಬೆಳಿಗ್ಗೆ 10.30 ಕ್ಕೆ ಉಚಿತ ಆರೋಗ್ಯ ತಪಾಸಣಾ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಹರಿಹರ: ಏ.4ರಂದು ಶ್ರೀ ಕಾಶಿ ನೀಲಕಂಠೇಶ್ವರ ಸ್ವಾಮಿ ಮೂರ್ತಿ ಪ್ರಾಣ ಪ್ರತಿಷ್ಟಾಪನೆ
ಹರಿಹರ : ನಗರದ ಮೆಟ್ಟಿಲು ಹೊಳೆ ರಸ್ತೆಯ ಕುರುಹಿನಶೆಟ್ಟಿ ಸಮಾಜದ ದೇವಸ್ಥಾನ ಆವರಣದಲ್ಲಿ ಶ್ರೀ ಕಾಶಿ ನೀಲಕಂಠೇಶ್ವರ ಸ್ವಾಮಿ ಹಾಗೂ ಗಣಪತಿ ನಂದಿ ದೇವರುಗಳ ಮೂರ್ತಿ ಪ್ರಾಣ ಪ್ರತಿಷ್ಟಾಪನೆ ಹಾಗೂ ಕಳಸಾರೋಹಣ ಸಮಾರಂಭವು ಏಪ್ರಿಲ್ 4 ರಂದು, ಶ್ರೀ ಜಗದ್ಗುರು ನಾಲ್ವಡಿ ನೀಲಕಂಠ ಪಟ್ಟದಾರ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿದೆ
ಕೊಕ್ಕನೂರು ದೇವಸ್ಥಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ
ಮಲೇಬೆನ್ನೂರು : ಸುಕ್ಷೇತ್ರ ಕೊಕ್ಕನೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಭಕ್ತರ ಅನುಕೂಲಕ್ಕಾಗಿ ಎಲ್ಐಸಿ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಗುರುವಾರ ಎಲ್ಐಸಿ ಶಿವಮೊಗ್ಗ ವಿಭಾಗೀಯ ಕಛೇರಿಯ ಮೈಕ್ರೋ ವಿಭಾಗದ ವ್ಯವಸ್ಥಾಪಕ ಶ್ರೀನಿವಾಸ್ ಉದ್ಘಾಟಿಸಿದರು.
ಆಧುನಿಕ ದೃಶ್ಯ ಮಾಧ್ಯಮದ ಹಾವಳಿಗೆ ರಂಗಭೂಮಿ ಕ್ಷೀಣ
ಟಿ.ವಿ., ಮೊಬೈಲ್, ಸಾಮಾಜಿಕ ಜಾಲತಾಣ ಸೇರಿದಂತೆ ಆಧುನಿಕ ದೃಶ್ಯ ಮಾಧ್ಯಮಗಳ ಹಾವಳಿಯಿಂದಾಗಿ ರಂಗಭೂಮಿ ಕ್ಷೀಣಿಸುತ್ತಿದೆ. ಒಂದು ಕಾಲದಲ್ಲಿ ಕರ್ನಾಟಕ ಕಲಾವಿದರ ಮತ್ತು ರಂಗಕಲೆಯ ತವರು ಮನೆಯಾಗಿತ್ತು
ಜೆಡಿಎಸ್ ಮಹಿಳಾ ಅಧ್ಯಕ್ಷರಾಗಿ ಗಾಯತ್ರಿ
ಹರಿಹರ : ದಾವಣಗೆರೆ ಜಿಲ್ಲಾ ಜೆಡಿಎಸ್ ಮಹಿಳಾ ಅಧ್ಯಕ್ಷರನ್ನಾಗಿ ಗಾಯತ್ರಿ ಹಾಲೇಶ್ ಅವರನ್ನು ಈ ಕೂಡಲೇ ಜಾರಿಗೆ ಬರುವಂತೆ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಜೆಡಿಎಸ್ ಜಿಲ್ಲಾಧ್ಯಕ್ಷ
ಬಿ. ಚಿದಾನಂದಪ್ಪ ಆದೇಶ ಹೊರಡಿಸಿದರು.
ಚುನಾವಣೆ ; ಚೆಕ್ಪೋಸ್ಟ್ಗಳಿಗೆ ಎಸ್ಪಿ ಉಮಾ ಭೇಟಿ, ಪರಿಶೀಲನೆ
ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ದಾವಣ ಗೆರೆ ನಗರ ವ್ಯಾಪ್ತಿಯಲ್ಲಿ ತೆರೆದಿರುವ ವಿವಿಧ ಚೆಕ್ಪೋಸ್ಟ್ಗಳಿಗೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹರಿಹರ ನಗರಸಭೆಯಿಂದ ಮತದಾನ ಜಾಗೃತಿ
ಹರಿಹರ : ನಗರಸಭೆಯ ಸ್ವೀಪ್ ತಂಡದ ವತಿಯಿಂದ ನಗರದ ರೈಲ್ವೆ ಮತ್ತು ಬಸ್ ನಿಲ್ದಾಣದ ಆವರಣದಲ್ಲಿ ನಾಗರಿಕರಿಗೆ ಮತದಾನದ ಮಹತ್ವದ ಬಗ್ಗೆ ಪೋಸ್ಟರ್ ಮೂಲಕ ಜಾಗೃತಿ ಮೂಡಿಸಲಾಯಿತು.
ಹರಪನಹಳ್ಳಿ ಟಿಎಂಎಇಎಸ್ ಶಿಕ್ಷಣ ಕಾಲೇಜ್ ವಿದ್ಯಾರ್ಥಿ ಸಂಘದ ಉದ್ಘಾಟನೆ
ಹರಪನಹಳ್ಳಿ : ಇಲ್ಲಿನ ಟಿಎಂಎ ಇಎಸ್ ಶಿಕ್ಷಣ ಮಹಾ ವಿದ್ಯಾಲಯದಲ್ಲಿ 2023-24ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
`ಮಳೆ-ಬೆಳೆ ಸಮೃದ್ಧಿಯಾಗಲಿ, ಸಕಲ ಜೀವರಾಶಿಗಳಿಗೆ ಒಳಿತಾಗಲಿ’
ಕಂಚಿಕೆರೆ ಸುಕ್ಷೇತ್ರ ಬಿದ್ದಹನುಮಪ್ಪನಮಟ್ಟಿ ಶ್ರೀ ಬಸವರಾಜ ಗುರೂಜಿ ಅವರು ಶ್ರೀ ದುರ್ಗಾಂ ಬಿಕಾ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವ ಸ್ಥಾನಕ್ಕೆ ಆಗಮಿಸಿ, ಅಮ್ಮನಿಗೆ ಸೀರೆ, ಕುಪ್ಪಸ, ಅರಿಷಿಣ, ಕುಂಕುಮ, ಉಡಿ ಅಕ್ಕಿ, ಬಳೆ, ತಾಂಬೂಲ, ಫಲಪುಷ್ಪ, ಹಣ್ಣು-ಕಾಯಿಯನ್ನು ಸಮರ್ಪಿ ಸಿದರು.
ಹರಿಹರ: ಚೆಕ್ಪೋಸ್ಟ್ನಲ್ಲಿ ಬೈಕ್ಗಳಲ್ಲಿ ಸಾಗಿಸುತ್ತಿದ್ದ 2.81 ಲಕ್ಷ ರೂ.ಗಳ ವಶ
ಹರಿಹರ : ನಗರದ ತುಂಗಭದ್ರಾ ನದಿ ಸೇತುವೆ ಪಕ್ಕದ ರಾಘವೇಂದ್ರ ಸ್ವಾಮಿ ಮಠದ ಹತ್ತಿರ ಇರುವ ಚೆಕ್ ಪೋಸ್ಟ್ನಲ್ಲಿ ನಿನ್ನೆ ಎರಡು ಬೈಕ್ಗಳಲ್ಲಿ ಸಾಗಿಸುತ್ತಿದ್ದ 2 ಲಕ್ಷದ 81 ಸಾವಿರದ 500 ರೂಪಾಯಿ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ
ಐದು ನೂರಕ್ಕೂ ಹೆಚ್ಚು ಜನರಿಗೆ ಔಷಧೋಪಚಾರ
ಜಗಳೂರು : ತಾಲ್ಲೂಕಿನ ದೊಣೆಹಳ್ಳಿ ಶ್ರೀ ಶರಣ ಬಸವೇಶ್ವರ ದಾಸೋಹ ಮಠದಲ್ಲಿ ನಡೆಯುತ್ತಿರುವ ದಾಸೋಹ ಸಂಸ್ಕೃತಿ ಉತ್ಸವದಲ್ಲಿ ಇಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನೆರವೇರಿತು.
ರೆಡ್ ಕ್ರಾಸ್ನಿಂದ ರಕ್ತದಾನ ಶಿಬಿರ
ನಗರದೇವತೆ ಶ್ರೀ ದುರ್ಗಂಬಿಕಾ ದೇವಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ದುರ್ಗಾಂಬಿಕಾ ದೇವಿ ಟ್ರಸ್ಟ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇವರುಗಳ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ನಡೆಸಲಾಯಿತು.
ವಚನ ಸಾಹಿತ್ಯದ ಮೂಲಕ ಶರಣರು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು
12ನೇ ಶತಮಾನದಲ್ಲಿ ವಚನ ಸಾಹಿತ್ಯ ಬೆಳೆದು ಬಂದಿದ್ದು, ವಚನ ಸಾಹಿತ್ಯದ ಮೂಲಕ ಹಲವಾರು ಶರಣರು ಜಾತಿ ವ್ಯವಸ್ಥೆಯನ್ನು ಕಿತ್ತೆಸೆದು ಸಮ ಸಮಾಜ ನಿರ್ಮಾಣ ಮಾಡುವುದಕ್ಕೆ ಶ್ರಮಿಸಿದರು
ಭದ್ರಾ ನೀರು ಹರಿಸಲು ಭಾರತೀಯ ರೈತ ಒಕ್ಕೂಟ ಒತ್ತಾಯ
ಭದ್ರಾ ಅಚ್ಚುಕಟ್ಟು ಪ್ರದೇಶ ದಾವಣಗೆರೆ ವಿಭಾಗದ ಶಿರಮಗೊಂಡನಹಳ್ಳಿ, ನಾಗನೂರು, ಬೆಳವನೂರು, ಶಾಮನೂರು, ಬಿಸಲೇರಿ, ಜರೇಕಟ್ಟೆ, 10 ರ ವಲಯ ಹರಿಹರ ವಿಭಾಗಕ್ಕೆ ನೀರು ಬಿಡುಗಡೆಯಾಗಿ 8 ದಿನಗಳಾದರೂ ತೋಟಗಳಿಗೆ, ದನ-ಕರುಗಳಿಗೆ ನೀರು ಲಭ್ಯವಿಲ್ಲ.
ಯಲವಟ್ಟಿ : ಪ್ರಣವ ಧ್ವಜಾರೋಹಣ
ಬ್ರಹ್ಮಲೀನ ಸದ್ಗುರುಗಳಾದ ಶ್ರೀ ಶಿವಾನಂದ ಶ್ರೀಗಳ ಮತ್ತು ಶ್ರೀ ನಿತ್ಯಾನಂದ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮದ ಅಂಗವಾಗಿ ಗುರುವಾರ ಬೆಳಿಗ್ಗೆ ಪ್ರಣವ ಧ್ವಜಾರೋಹಣವನ್ನು ಮಲೇಬೆನ್ನೂರಿನ ಶಿವ ಸಹಕಾರ ಸಂಘದ ಅಧ್ಯಕ್ಷ ಡಾ.ಬಿ.ಚಂದ್ರಶೇಖರ್ ನೆರವೇರಿಸಿದರು.
ಸಿಎನ್ಕೆ ಸ್ಮರಣಾರ್ಥ ಪುಸ್ತಕ ವಿತರಣೆ
ನಾಗಮ್ಮ ಕೇಶವಮೂರ್ತಿ ಅವರ ಸ್ಮರಣೆಗಾಗಿ ಮೌಲಾನಾ ಆಜಾದ್ ಸಂಸ್ಥೆಯ ವತಿಯಿಂದ ನಗರದ ವಿರಕ್ತ ಮಠದ ಶ್ರೀ ಮುರುಘರಾಜೇಂದ್ರ ಶಾಲೆಯಲ್ಲಿ ಶ್ರೀ ಬಸವಪ್ರಭು ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಇಂದು ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಲಾಯಿತು.
ಜಿಲ್ಲಾ – ಪ್ರಾದೇಶಿಕ ಪತ್ರಿಕೆಗಳಿಗೆ ಜಾಹೀರಾತು ನೀಡಲು ಒತ್ತಾಯ
ಜಾಹೀರಾತುಗಳನ್ನು ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಬಿಡುಗಡೆ ಮಾಡುವಂತೆ ಕೋರಿ, ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ದಾವಣಗೆರೆ ಜಿಲ್ಲಾ ಘಟಕದಿಂದ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಅಫ್ರಿನ್ ಬಾನು ಎಸ್. ಬಳ್ಳಾರಿ ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಲಾಯಿತು.
ಕಬ್ಬಡಿ ಪ್ರೀಮಿಯರ್ ಲೀಗ್ ಪ್ರಯುಕ್ತ ಮ್ಯಾರಥಾನ್
ಅಮೆಚೂರ್ ಕಬಡ್ಡಿ ಸಂಸ್ಥೆ, ಜನಪ್ರಿಯ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಸ್ಥೆ ಇವರ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದಿನಿಂದ 31ರವರೆಗೆ ನಡೆಯುವ ಕಬ್ಬಡ್ಡಿ ಪ್ರೀಮಿಯರ್ ಲೀಗ್ -24 ಪಂದ್ಯಾವಳಿಗೆ ಜಯದೇವ ವೃತ್ತದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ನಿನ್ನೆ ಮ್ಯಾರಥಾನ್ ಏರ್ಪಡಿಸಲಾಗಿತ್ತು.
ಮುಮುಕ್ಷು ಶ್ರೀ ಮಯಂಕ್ ಮಹಾವೀರ ಸಂಘವಿಯ ಜೈನ್ ಸಂತ ದೀಕ್ಷೆ
ಸಂಘವಿ ಮಹಾವೀರ ಜೈನ್ ಅವರ 17 ವರ್ಷದ ಪುತ್ರ ಮಯಂಕ್ ಅವರು ಬರುವ ಏಪ್ರಿಲ್ 1 ರ ಸೋಮವಾರ ಲೌಕಿಕ ಸುಖಮಯ ಬದುಕಿನಿಂದ ನಿರ್ಗಮಿಸಿ, ಕಠಿಣವಾದ ಜನ್ಮ ಜನ್ಮಾಂತರಗಳ ಹುಟ್ಟು - ಸಾವುಗಳ ಜಂಜಾಟಗಳಿಂದ ಮುಕ್ತಿ ಹೊಂದಬಹುದಾದಂತಹ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ.
ಶ್ರೀ ಬಕ್ಕೇಶ್ವರ ಸ್ವಾಮಿ ನೂತನ ರಥ ಪೂಜೆ
ನಗರದ ಚೌಕೀಪೇಟೆ ಯಲ್ಲಿರುವ ಶ್ರೀ ಗುರು ಬಕ್ಕೇಶ್ವರ ಸ್ವಾಮಿಯ ನೂತನ ರಥದ ಪೂಜಾ ಹಾಗೂ ಸಮರ್ಪಣಾ ಕಾರ್ಯಕ್ರಮದಲ್ಲಿ ಸೇವಾ ಸಮಿತಿ, ರಥೋತ್ಸವ ಸಮಿತಿ ಸದಸ್ಯರುಗಳು, ದೇವರಮನಿ ಶಿವಕುಮಾರ್, ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ ಮತ್ತಿತರರು ಅಲ್ಲಿದ್ದರು.
ಕಾಣದ ಕೈಗಳಿಂದ ಅವಕಾಶ ವಂಚಿತನಾಗಿದ್ದೇನೆ : ವಿನಯ್
ಹೊನ್ನಾಳಿ : ಕಾಣದ ಕೈಗಳಿಂದ ಟಿಕೆಟ್ ಪಡೆಯುವಲ್ಲಿ ವಂಚಿತನಾಗಿದ್ದು, ಅವಕಾಶಗಳನ್ನು ನಾವೇ ಸೃಷ್ಠಿಸಿಕೊಳ್ಳಬೇಕಾಗಿದೆ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಹಿಂದ ಯುವ ನಾಯಕ ಜಿ.ಬಿ. ವಿನಯ್ ಕುಮಾರ್ ಹೇಳಿದರು.
ಕುಂಬಳೂರು : ಮುಳ್ಳೋತ್ಸವಕ್ಕೆ ಅಪಾರ ಜನ
ಮಲೇಬೆನ್ನೂರು : ಕುಂಬಳೂರು ಗ್ರಾಮದ ಆರಾಧ್ಯ ದೈವ ಶ್ರೀ ಹನುಮಂತ ದೇವರ ಮಹಾರಥೋತ್ಸವವು ಬುಧವಾರ ಬೆಳಗಿನ ಜಾವ ಸಕಲ ವಾದ್ಯಗಳೊಂದಿಗೆ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಈ ಬಾರಿ ಶೇ.85ಕ್ಕಿಂತ ಹೆಚ್ಚು ದಾಖಲೆ ಮತದಾನ ಆಗಬೇಕು
ಪ್ರಸ್ತುತ 18ನೇ ಲೋಕಸಭಾ ಚುನಾವಣೆಯಲ್ಲಿ ಶೇ 85ಕ್ಕಿಂತಲೂ ಹೆಚ್ಚಿನ ಮತದಾನವಾಗುವಂತೆ ಮಾಡಿ, ಹೊಸ ದಾಖಲೆ ನಿರ್ಮಿಸುವಂತೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ತಿಳಿಸಿದರು.
ಆರೋಗ್ಯಪೂರ್ಣ ಸಮಾಜಕ್ಕೆ ನೈತಿಕ ಮೌಲ್ಯಗಳು ಅಗತ್ಯ
ಬಾಳೆಹೊನ್ನೂರು : ಸುಖ,ಶಾಂತಿದಾಯಕ ಬದುಕಿಗೆ ಧರ್ಮ ಮತ್ತು ಧರ್ಮಾಚರಣೆ ಮುಖ್ಯ. ಉತ್ತಮ ಸಮಾಜ ನಿರ್ಮಾಣಕ್ಕೆ ಶಾಸ್ತ್ರ ಮತ್ತು ಶಸ್ತ್ರದ ಭಯ ಇರಬೇಕಂತೆ.
ಪಠ್ಯಪುಸ್ತಕಗಳಿಗೆ ಸೀಮಿತರಾಗದೆ, ಸಾಮಾಜಿಕ ಕಾಳಜಿಯ ಜಾಗೃತಿ ಕಡೆಗೆ ಗಮನ ಹರಿಸಬೇಕು
ನಮ್ಮ ದೇಶವನ್ನು ಆಳುವ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವ ಹಂತದಲ್ಲಿ ಜಾಗೃತಿ ಯೊಂದಿಗೆ ಮತದಾನ ಮಾಡುವುದರ ಜೊತೆಗೆ ಜವಾಬ್ದಾರಿ ಮತ್ತು ಬದ್ಧತೆಯಿಂದ ನಮ್ಮ ದೇಶದ ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕು
ಕಲಿಕೆಯೊಂದಿಗೆ ಕೌಶಲ್ಯಇಂದಿನ ಪ್ರಸ್ತುತತೆ
ಪ್ರಪಂಚವು ಬಹಳ ವೇಗವಾಗಿ ಬದಲಾಗುತ್ತಿದೆ ಮತ್ತು ಈ ರೂಪಾಂತರದಲ್ಲಿ ಉದ್ಯೋಗದ ಬದಲಾವಣೆಯೂ ಆಗುತ್ತಿದೆ. ಇದರಲ್ಲಿ ಕೌಶಲ್ಯವು ಮಹತ್ವದ ಪಾತ್ರವನ್ನು ವಹಿಸುತ್ತದೆ.
ರಾಣೇಬೆನ್ನೂರು : ಭಾರತ್ ಅಕ್ಕಿ ವಿತರಣೆ
ರಾಣೇಬೆನ್ನೂರು : ಇಲ್ಲಿನ ಅಂಚೆ ವೃತ್ತದಲ್ಲಿ ಕೇಂದ್ರ ಸರ್ಕಾರದ ಭಾರತ ಅಕ್ಕಿ ವಿತರಣೆ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಅರುಣಕುಮಾರ ಪೂಜಾರ್ ಚಾಲನೆ ನೀಡಿದರು.
ಸಿದ್ದಮ್ಮ ಪಾರ್ಕ್ ಬೆಂಚ್ಗಳಿಗೆ ಸುಣ್ಣ-ಬಣ್ಣ
ನಗರದ ಕೆ.ಬಿ ಬಡಾವಣೆಯ ಬಳ್ಳಾರಿ ಸಿದ್ದಮ್ಮ ಪಾರ್ಕ್ನಲ್ಲಿರುವ ಈ ಹಿಂದೆ ದಾನಿಗಳು ನೀಡಿದ 32 ಕ್ಕೂ ಹೆಚ್ಚು ಬೆಂಚ್ಗಳು ಮತ್ತು ಕುಟೀರಕ್ಕೆ ದಾನಿಗಳು ನೀಡಿದ ಬಣ್ಣದಿಂದ ಶೃಂಗಾರಗೊಂಡಿವೆ.