ಪಾದಚಾರಿಗಳಿಗೆ ಅನುಕೂಲ ಮಾಡಿರಿ..

ಮಾನ್ಯರೇ,

ನಗರದ ಅಶೋಕ ಚಿತ್ರಮಂದಿರದ ಬಳಿ ಅಂಡರ್ ಪಾಸ್ ಆರಂಭವಾದ ನಂತರ ರೈಲ್ವೇ ಗೇಟ್ ಮುಚ್ಚಲಾಗಿದ್ದು, ಅಲ್ಲಿ  ಅಡ್ಡಾಡುವ  ಪಾದಚಾರಿಗಳಿಗೆ ತೊಂದರೆ ಉಂಟಾಗಿದೆ.   ದೇವಸ್ಥಾನಕ್ಕೆ ಬರುವ ಭಕ್ತಾದಿಗಳೂ ಸೇರಿದಂತೆ,   ವಯಸ್ಸಾದವರೂ ಗೇಟಿನಲ್ಲಿ ಬಗ್ಗಿ ಬರಬೇ ಕಾಗಿದೆ.  ಆದ್ದರಿಂದ ಬಹಳ ತೊಂದರೆ ಉಂಟಾಗಿದೆ. ಈ ಕೂಡಲೇ  ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಕೋರುತ್ತೇನೆ.


– ಜೆ.ಸೋಮನಾಥ್, ಸಮಾಜ ಸೇವಕರು, ದಾವಣಗೆರೆ.

error: Content is protected !!