ಮತ್ತೆ ಗೆಲ್ಲುವ ವಿಶ್ವಾಸ : ಶಾಸಕ ಎಸ್.ಭೀಮಾನಾಯ್ಕ

ಮತ್ತೆ ಗೆಲ್ಲುವ ವಿಶ್ವಾಸ  :  ಶಾಸಕ ಎಸ್.ಭೀಮಾನಾಯ್ಕ

ಕೊಟ್ಟೂರು, ಮಾ. 27 –  ಕಾಂಗ್ರೆಸ್ ಟಿಕೆಟ್ ಸಿಕ್ಕಿರುವ ಹಿನ್ನೆಲೆಯಲ್ಲಿ ಶಾಸಕ ಎಸ್.ಭೀಮಾನಾಯ್ಕ ಅವರು ಪತ್ನಿ ಗೀತಾಬಾಯಿ ಅವರೊಂದಿಗೆ ಶನಿವಾರ ಸಂಜೆ ಕೊಟ್ಟೂರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆದರು. 

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡಿದ ಸಾಧನೆ ಮತ್ತು ಹಗರಿಬೊಮ್ಮನ ಹಳ್ಳಿ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಲ್ಲಿ ನಾನು ಮಾಡಿರುವ ಸಾಧನೆ ಅಭಿವೃದ್ದಿ ಮಂತ್ರವನ್ನು ಇರಿಸಿಕೊಂಡು ಮತ ಎಂಬ ಕೂಲಿ ಕೊಡಿ ಎಂದು ಪ್ರತಿ ಮತದಾರರ ಬಳಿ ತೆರಳಿ ಮತ ಯಾಚಿಸುತ್ತೇನೆ ಎಂದು ಭೀಮಾನಾಯ್ಕ ಹೇಳಿದರು. 

ಪಕ್ಷದ ಕಾರ್ಯಕರ್ತರೊಂದಿಗೆ ಸಿಹಿ ಹಂಚಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.  

ಮಾಲ್ವಿ ಜಲಾಶಯಕ್ಕೆ ನೀರು ತರುವ ಬೃಹತ್ ಯೋಜನೆ ಕೈಗೊಂಡಿದ್ದು ಚಿಲವಾರ ಬಂಡಿ ಏತ ನೀರಾವರಿ ಯೋಜನೆ ಜಾರಿಗೆ ಪ್ರಯತ್ನ ಪಟ್ಟಿರುವ ಬಗ್ಗೆ ಕ್ಷೇತ್ರದ ಜನತೆಗೆ ಹೆಮ್ಮೆ ಇದ್ದು, ಕೊಟ್ಟೂರು ಭಾಗದಲ್ಲೂ ಸಹ ಈಗಿನ ಬಿಜೆಪಿ ಸರ್ಕಾರದ ಅಸಹಕಾರದ ನಡುವೆಯೂ ಸಾಕಷ್ಟು ಅಭಿವೃದ್ದಿ ಕಾರ್ಯ ಕೈಗೊಂಡಿರುವುದಕ್ಕೆ ನಮಗೆ ಹೆಮ್ಮೆ ಇದೆ. ಇದನ್ನೇ ಆಧಾರವಾಗಿರಿಸಿಕೊಂಡು ಕ್ಷೇತ್ರದ ಜನರಲ್ಲಿ ಮತಯಾಚಿಸುವೆ ಎಂದು ಅವರು ಹೇಳಿದರು. 

ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐ.ದಾರುಕೇಶ, ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ತೋಟದ ರಾಮಣ್ಣ, ಕೆಪಿಸಿಸಿ ಸದಸ್ಯ ಗೂಳಿ ಮಲ್ಲಿಕಾರ್ಜುನ, ಅಡಿಕಿ ಮಂಜು ನಾಥ, ವಕೀಲ ಹನುಮಂತಪ್ಪ, ಅಚೆಮನಿ ಮಲ್ಲಿಕಾರ್ಜುನ, ಕುಮಾರ್, ಸತೀಶ್, ನಾಗರಾಜಪ್ಪ ಮತ್ತಿತರರು ಇದ್ದರು.

error: Content is protected !!