ವಾಲ್ಮೀಕಿ ಸಮಾಜದ ಅಧ್ಯಕ್ಷರಾಗಿ ಬೇಲಿಮಲ್ಲೂರು ಶಿವಾನಂದ

ವಾಲ್ಮೀಕಿ ಸಮಾಜದ ಅಧ್ಯಕ್ಷರಾಗಿ ಬೇಲಿಮಲ್ಲೂರು ಶಿವಾನಂದ

ಹೊನ್ನಾಳಿ, ಜೂ.5- ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ನೂತನ ಅಧ್ಯಕ್ಷರಾಗಿ ಬೇಲಿಮಲ್ಲೂರು ಟಿ.ಎಂ. ಶಿವಾನಂದ ಅವರು ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಾಲ್ಮೀಕಿ ಸಮುದಾಯ ಭವನದಲ್ಲಿ ಸೋಮವಾರ ಕುಳಗಟ್ಟಿ ರಂಗನಾಥ ಅವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಸಮಾಜದ ಗೌರವ ಅಧ್ಯಕ್ಷರಾಗಿದ್ದ ಕೊಣನತಲೆ ನಾಗಪ್ಪ, ತಿಮ್ಮೇನಹಳ್ಳಿ ಚಂದಪ್ಪ, ಕುಳಗಟ್ಟಿ ಜಗದೀಶ, ಮಾರಿಕೊಪ್ಪ ತಿಮ್ಮಪ್ಪ, ಬೇಲಿಮಲ್ಲೂರು ಗಂಡುಗಲಿ ಮಂಜಪ್ಪ ಇವರ ನೇತೃತ್ವದಲ್ಲಿ ಈ ಆಯ್ಕೆ ನಡೆಯಿತು.

ನೂತನ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಹನುಮಂತ, ಕೋಶಾಧ್ಯಕ್ಷ ಕುಳಗಟ್ಟಿ ಎಂ.ಆರ್. ಹನುಮಂತಪ್ಪ, ಸಂಘಟನಾ ಕಾರ್ಯದರ್ಶಿ ಹರಳಹಳ್ಳಿ ನಾಗರಾಜ, ದಿಡಗೂರಹರಳಹಳ್ಳಿ  ಮಲ್ಲಪ್ಪ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರುಗಳಾಗಿ ಕೋಣನತಲೆ ನಾಗೇಂದ್ರಪ್ಪ, ಕುಂದೂರು ಕುಬೇರಪ್ಪ, ಬಲಮುರಿ ಹಳದಪ್ಪ, ಹೊನ್ನಾಳಿ ಗಂಗಾಧರ, ಸಹಕಾರ್ಯದರ್ಶಿಗಳಾಗಿ ತಿಮ್ಮೇನಹಳ್ಳಿ ರಂಗನಾಥ, ಕುಳಗಟ್ಟಿ ಡಿ.ಬಿ. ರಮೇಶ, ಲಿಂಗಾಪುರ ಪರಶುರಾಮ ಆಯ್ಕೆಗೊಂಡರು.

error: Content is protected !!