ನಗರದಲ್ಲಿ ನಾಳೆ ಶನಿಮೌನಿ ಅಮಾವಾಸ್ಯೆ, ಸೂರ್ಯಗ್ರಹಣ

ದಾವಣಗೆರೆ, ಮಾ.27- ನಗರದ ಪಿ.ಬಿ.ರಸ್ತೆಯ ಪಂಚದೇವಸ್ಥಾನಗಳ ಮಹಾಕ್ಷೇತ್ರದಲ್ಲಿ ಶನಿಮೌನಿ ಅಮಾವಾಸ್ಯೆ ಹಾಗೂ ಸೂರ್ಯಗ್ರಹಣ ಹಾಗೂ ವಿಶ್ವಾಸುನಾಮ ಸಂವತ್ಸರಂಭದ ಪ್ರಯುಕ್ತ ನಾಡಿದ್ದು  ದಿನಾಂಕ 29 ರ ಶನಿವಾರ ಬೆಳಿಗ್ಗೆ ಪಂಚದೇವರಗಳಿಗೆ, ಶ್ರೀಕಾಶಿ ವಿಶ್ವನಾಥಲಿಂಗ ಶ್ರೀಶನೇಶ್ವರಸ್ವಾಮಿಗೆ ತೈಲಾಭಿಷೇಕ, ಬೆಳಿಗ್ಗೆ 9ಕ್ಕೆ ಶ್ರೀ ಶನೇಶ್ವರಸ್ವಾಮಿ ಸಹಿತ ಪಂಚದೇವರಗಳ ಪಲ್ಲಕ್ಕಿ ಉತ್ಸವ ಇರುತ್ತದೆ. ಬೆಳಿಗ್ಗೆ 9.30 ಗಂಟೆಗೆ ಪಂಚದೇವಸ್ಥಾನಗಳ ಆವರಣದಲ್ಲಿ ಶನೇಶ್ವರ ತಿಲ ಹೋಮ, ಹಾಗೂ, ಶನೇಶ್ವರಸಹಿತ ನವಗ್ರಹ ಶಾಂತಿ ಹೋಮವಿರುತ್ತದೆ.  

error: Content is protected !!