ಡಾ. ಎಂ. ಬಸವಂತಪ್ಪ ನಿಧನಕ್ಕೆ ಜಿಲ್ಲಾ ಕಸಾಪ ಕಂಬನಿ

ದಾವಣಗೆರೆ, ಅ. 13- ಸರಳ ಸಜ್ಜನಿಕೆ ಸಾಕಾರ ಮೂರ್ತಿಯಾಗಿದ್ದ ತಮ್ಮ ವೈದ್ಯಕೀಯ ವೃತ್ತಿಯಲ್ಲಿ ಅಪಾರ ಜನಪ್ರಿಯತೆ ಪಡೆದಿದ್ದ, 2022 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಸಂತೆಬೆನ್ನೂರಿನ ಡಾ. ಎಂ. ಬಸವಂತಪ್ಪ ಅವರ ನಿಧನಕ್ಕೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.  

ಡಾ. ಬಸವಂತಪ್ಪ ಅವರ ಅಗಲಿಕೆಯಿಂದ ಬಡವರ ಪಾಲಿನ ವೈದ್ಯ ದೇವರನ್ನು ಆ ಭಾಗದ ಜನರು ಕಳೆದುಕೊಂಡಂತಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್  ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಹೇಳಿದ್ದಾರೆ.

error: Content is protected !!