ನಗರದಲ್ಲಿ ಇಂದು ದತ್ತಿ ಉಪನ್ಯಾಸ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ, ಕದಳಿ ಮಹಿಳಾ ವೇದಿಕೆಯಿಂದ 157ನೇ ಕಮ್ಮಟದಲ್ಲಿ ದತ್ತಿ ಉಪನ್ಯಾಸ, ವಚನ ದಾಸೋಹ, ಕಲ್ಯಾಣಕ್ರಾಂತಿ ವಿಜಯ ಹಾಗೂ ಗಂಗಾಂಬಿಕೆಯವರ ಶರಣೋತ್ಸವವು ಇಂದು ಮಧ್ಯಾಹ್ನ 3.30ಕ್ಕೆ ರಾಘವೇಂದ್ರ ಹೈಟೆಕ್‌ ಪಿಯು ಕಾಲೇಜಿನಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ಮಮತಾ ನಾಗರಾಜ್‌  ವಹಿಸುವರು. `ಯುವ ಜನಾಂಗ ಮತ್ತು ವ್ಯಕ್ತಿತ್ವ ನಿರ್ಮಾಣದಲ್ಲಿ ಶರಣ ಸಾಹಿತ್ಯ-ಸಂಸ್ಕೃತಿ’ ವಿಷಯದ ಕುರಿತು ಎ.ಆರ್.ಜಿ. ಕಾಲೇಜಿನ ಪ್ರೊ. ಡಾ. ಮಲ್ಲಿಕಾರ್ಜುನ ಜವಳಿ ಉಪನ್ಯಾಸ ನೀಡುವರು. ಡಾ. ಎ.ಜೆ. ನೀತಾ, ಪ್ರಿನ್ಸಿಪಾಲ್‌, ಬಿ.ಇ.ಎ. ಶಿಕ್ಷಣ ವಿದ್ಯಾಲಯ ಉಪಸ್ಥಿತರಿರುವರು.

error: Content is protected !!