ಹರಿಹರ,ಜು.18- ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ, ಹರ ಕ್ಷೇತ್ರದಲ್ಲಿ ಇದೇ ದಿನಾಂಕ 21ರ ಭಾನುವಾರ ಗುರು ಪೂರ್ಣಿಮೆ ಮಹೋತ್ಸವ ನಡೆಯಲಿದೆ. ಪ್ರಾತಃಕಾಲದಲ್ಲಿ ಲಿಂಗೈಕ್ಯ ಜಗದ್ಗುರು ಶ್ರೀ ಡಾ.ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಇಷ್ಟಲಿಂಗಾರ್ಚನೆ, 10 ಗಂಟೆಗೆ ಮೈಲಾರ ಶ್ರೀ ಬಸವಲಿಂಗ ಶರಣರ ಗುರುಕರಣ ತ್ರಿವಿಧ ಪಠಣ ನಂತರ ಶ್ರೀ ಗುರು ಪಾದ ಪೂಜೆ, ಶ್ರೀ ಗುರೂಪದೇಶ, ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
March 19, 2025