ನಗರದ ಶ್ರೀ ದಾನಮ್ಮ ದೇವಸ್ಥಾನದಲ್ಲಿ ನಾಡಿದ್ದು ಬಾದಾಮಿ ಅಮಾವಾಸ್ಯೆ

ನಗರದ ಶ್ರೀ ದಾನಮ್ಮ ದೇವಸ್ಥಾನದಲ್ಲಿ ನಾಡಿದ್ದು ಬಾದಾಮಿ ಅಮಾವಾಸ್ಯೆ

ದಾವಣಗೆರೆ, ಜೂ.3- ನಗರದ ದೊಡ್ಡಪೇಟೆಯಲ್ಲಿರುವ ಶ್ರೀ ಬಸವೇಶ್ವರ ಮತ್ತು ಶ್ರೀ ದಾನಮ್ಮ ದೇವಿ ದೇವಸ್ಥಾನದಲ್ಲಿ ಬಾದಾಮಿ ಅಮಾವಾಸ್ಯೆ ಪ್ರಯುಕ್ತ ಇದೇ ದಿನಾಂಕ 6ರಂದು ಬೆಳಿಗ್ಗೆ ಶ್ರೀ ಸ್ವಾಮಿಗೆ ಅಭಿಷೇಕ, ಪೂಜೆ, ಹೂವಿನ ಅಲಂಕಾರ ನಡೆಯಲಿದೆ. ನಂತರ ಮಧ್ಯಾಹ್ನ 12.30ಕ್ಕೆ ಸರ್ವ ಭಕ್ತಾದಿಗಳಿಗೆ ದಾಸೋಹ ಏರ್ಪಡಿಸಲಾಗಿದೆ. ಶ್ರೀಮತಿ ಸರೋಜ ತೋಂಟೇಶ ಮಾನ್ವಿ ಮತ್ತು ಮಕ್ಕಳು (ಗದಗ), ಶ್ರೀಮತಿ ಅರ್ಚನಾ ಶಶಿಧರ ಮತ್ತು ಕುಟುಂಬದವರು (ಚಿತ್ರದುರ್ಗ) ಇವರು ದಾಸೋಹದ ಸೇವಾರ್ಥಿಗಳಾಗಿದ್ದಾರೆ.

error: Content is protected !!