ಹರಪನಹಳ್ಳಿ ಪಟ್ಟಣದ ಜೋಯಿಸರಕೇರಿ ಯಲ್ಲಿರುವ ಶಂಕರ ಮಠದಲ್ಲಿ ಇಂದು ಮತ್ತು ನಾಳೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಶಂಕರ ಸೇವಾ ಸಮಿತಿಯ ಅಧ್ಯಕ್ಷ ಯು. ರಾಘವೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಇಂದು ಹರಿಹರಪುರ ಆದಿ ಶಂಕರಚಾರ್ಯ ಶಾರದಾ ಲಕ್ಷ್ಮಿನರಸಿಂಹ ಕ್ಷೇತ್ರದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಶೋಭಯಾತ್ರೆ ನಡೆಯಲಿದೆ.
ನಾಳೆ ಮಠದಲ್ಲಿ ನೂತನವಾಗಿ ನವೀಕರಣಗೊಂಡ ಶ್ರೀ ಶಂಕರ ಭಗವತ್ಪಾದಾಚಾರ್ಯರ ಮೂರ್ತಿ ಹಾಗೂ ನೂತನ ಶಿಲಾ ಮಂಟಪ ಶ್ರೀ ಗುರುದೇವ ದತ್ತಾತ್ರೇಯ ನೂತನ ಶಿಲಾ ವಿಗ್ರಹ ಹಾಗೂ ಶ್ರೀ ಮಹಾಗಣಪತಿ ಮತ್ತು ಶಾರದಾಂಬ ದೇವಿಯ ಪುನರ್ ಪ್ರತಿಷ್ಠಾಪನೆ ಕಾರ್ಯ ಜರುಗಲಿದೆ ಎಂದು ಶಂಕರ ಸೇವಾ ಸಮಿತಿಯ ಎಸ್. ಶ್ಯಾಮಸುಂದರ ಭಟ್ ವಿವರಿಸಿದ್ದಾರೆ.