ದಾವಣಗೆರೆ, ಮೇ 23- ಕೈಮಗ್ಗ ನೇಕಾರರ ಕೌಶಲ್ಯಗಳನ್ನು ಗುರುತಿಸಿ, ಕೈಮಗ್ಗ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಹಾಗೂ ಬೆಂಬಲ ನೀಡಲು ರೇಷ್ಮೆ, ಹತ್ತಿ ಮತ್ತು ಉಣ್ಣೆ ಕ್ಷೇತ್ರ, ವಲಯದ ಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ನೇಕಾರರು ಮೇ 30 ರೊಳಗಾಗಿ ನಗರದ ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕರ ಕಛೇರಿ, ರಾಮಾಂಜನೇಯ ಪ್ಲಾಜಾ, ನಿಟ್ಟುವಳ್ಳಿ ಇಲ್ಲಿಗೆ ಸಲ್ಲಿಸಬ ಹುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ಅಥವಾ ದೂರವಾಣಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ, ಉಪ ನಿರ್ದೇಶಕರ ಕಚೇರಿ ಹಾಗೂ ದೂ:08192-262362ಗೆ ಕೋರಲಾಗಿದೆ.