ಇಂದು ಬಸವ ಜಯಂತಿ ಕವಿಗೋಷ್ಠಿ

ಶ್ರೀ ಬಸವ ಜಯಂತಿ ಮತ್ತು ಶ್ರೀ ಶಿವಕುಮಾರ ಸ್ವಾಮೀಜಿಯವರ   116ನೇ ಜನ್ಮ ದಿನೋತ್ಸವ  ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 10-30 ಕ್ಕೆ ದಾವಣಗೆರೆಯ ನಿರ್ವರ್ಣ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ. 

ವಚನ ಸಾಹಿತ್ಯ ಪರಿಷತ್ ಮತ್ತು ಕನ್ನಡ ಚುಟುಕು ಸಾಹಿತ್ಯ ಪರಿಷತ್ ಮತ್ತಿತರೆ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಜಿ.ಹೆಚ್.ರಾಜಶೇಖರ್ ಗುಂಡಗಟ್ಟಿ ವಹಿಸುವರು. ಎಸ್.ಮಲ್ಲಿಕಾರ್ಜುನ ಕಾರ್ಯಕ್ರಮವನ್ನು ಉದ್ಘಾಟಿಸುವರು. 

ಕೆ.ಬಿ.ಕೊಟ್ರೇಶ್, ಎಂ.ಬಸವರಾಜ, ಶ್ರೀಮತಿ ನೀಲಗುಂದ ಜಯಮ್ಮ,  ರವಿಕುಮಾರ್ ಉಪಸ್ಥಿತರಿರುವರು. `ಶ್ರೀ ಬಸವಣ್ಣನವರ ನಡೆ  ನುಡಿ ಕಾಯಕ ಸೇವೆ’ ಕುರಿತು ನಾ.ಕೊಟ್ರೇಶ್ ಉತ್ತಂಗಿ ಮತ್ತು`ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಯವರ ಕಾಯಕಲ್ಪ’  ವಿಷಯ ಕುರಿತಂತೆ ಶ್ರೀಮತಿ ಶಕುಂತಲಮ್ಮ ಗುರುಸಿದ್ಧಸ್ವಾಮಿ ಉಪನ್ಯಾಸ ನೀಡಲಿದ್ದಾರೆ. ಪ್ರಕಾಶ್ ಬೂಸನೂರ್ ಕವಿಗೋಷ್ಠಿ ಉದ್ಘಾಟಿಸುವರು.

error: Content is protected !!