ರಾಣೇಬೆನ್ನೂರು : ಇಂದು ಬಸವ ಜಯಂತಿ

ವಿಶ್ವಧರ್ಮ ಪ್ರವಚನ ಸಮಿತಿ ಇವರ ಆಶ್ರಯದಲ್ಲಿ ಇಂದು ಸಂಜೆ ಕುಂದಾಪೂರ ಸಭಾಭವನದಲ್ಲಿ ರತ್ನಾಕರ ಕುಂದಾಪೂರ ಅಧ್ಯಕ್ಷತೆಯಲ್ಲಿ  ಬಸವ ಜಯಂತಿ ಕಾರ್ಯಕ್ರಮ ನಡೆಯಲಿದೆ. ಗಂಡಿಗೆವಾಡ ಹಿರೇಮಠದ ಶ್ರೀ ಮೃತ್ಯುಂಜಯ ಸ್ವಾಮಿಗಳು ಅನುಭಾವದ ನುಡಿಗಳನ್ನಾಡಲಿದ್ದಾರೆ.

ಎಂ.ಜಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಸುವರ್ಣಾದೇವಿ ಪಾಟೀಲ, ಎಂ.ಎಸ್. ಅರಕೇರಿ, ವಾಸು ಗುಪ್ತಾ, ವಾಸು ಲದ್ವಾ, ವಿ.ಪಿ.ಲಿಂಗನಗೌಡ, ಕಿರಣ ಮಾಂಡ್ರೆ, ಸುರೇಶ ಮಾಕನೂರ, ವಚನಶ್ರೀ ಪಾಟೀಲ, ಅಂದಾನೆಪ್ಪ ಅಸುಂಡಿ ಉಪಸ್ಥಿತರಿರುವರು.

error: Content is protected !!