ಚಳ್ಳಕೆರೆ, ಫೆ. 26- ಇಲ್ಲಿನ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಫುಟ್ಪಾತ್ನಲ್ಲಿ ಸುಮಾರು 20ಕ್ಕೂ ಹೆಚ್ಚು ಹಣ್ಣಿನ ಅಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಫುಟ್ಪಾತ್ ಹಣ್ಣಿನ ಅಂಗಡಿ ಮಾಲೀಕ ಕುಮಾರ್ ಪತ್ರಿಕೆಯೊಂದಿಗೆ ಮಾತನಾಡಿ, ಬಹಳ ಪ್ರಮಾಣದಲ್ಲಿ ಹಣ್ಣುಗಳು ಸುಟ್ಟು ಕರಕಲಾಗಿವೆ ಎಂದು ತಿಳಿಸಿದರು. ಸ್ಥಳಕ್ಕೆ ಶಾಸಕ ಟಿ. ರಘು ಮೂರ್ತಿ ಮತ್ತು ನಗರಸಭೆ ಅಧ್ಯಕ್ಷರಾದ ಸುಮಾ ಅಂಜಿನಪ್ಪ ಮತ್ತು ನಗರಸಭೆ ಸದಸ್ಯರಾದ ರಮೇಶ್ಗೌಡ, ಮಲ್ಲಿಕಾರ್ಜುನ ಮತ್ತು ನಗರಸಭೆ ಅಧಿಕಾರಿಗಳು ಭೇಟಿ ನೀಡಿದರು. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸತೀಶ್ನಾಯ್ಕಗೆ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚುವಂತೆ ಶಾಸಕರು ಒತ್ತಾಯಿಸಿದರು.
March 29, 2024