17ಕ್ಕೆ ಆವರಗೊಳ್ಳ ವೀರಭದ್ರ ಸ್ವಾಮಿ ರಥೋತ್ಸವ

17ಕ್ಕೆ ಆವರಗೊಳ್ಳ ವೀರಭದ್ರ ಸ್ವಾಮಿ ರಥೋತ್ಸವ

ದಾವಣಗೆರೆ ಸಮೀಪದ ಆವರಗೊಳ್ಳ ಗ್ರಾಮದ ಶ್ರೀ ವೀರ ಭದ್ರೇಶ್ವರ ಸ್ವಾಮಿಯ ರಥೋತ್ಸವವು ಇದೇ ದಿನಾಂಕ 17ರಂದು ಜರುಗಲಿದೆ ಎಂದು ವೀರಭದ್ರೇಶ್ವರ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಬಿ.ಎಂ. ಷಣ್ಮುಖಯ್ಯ ತಿಳಿಸಿದರು. 

ಇಂದು ರಾತ್ರಿ  8 ಗಂಟೆಗೆ ರಥಕ್ಕೆ ಕಳಸಾರೋಹಣ ಹಾಗೂ 9 ಗಂಟೆಗೆ ಅಶ್ವಾರೋಹಣ ಉತ್ಸವ ನಡೆೆಯಲಿವೆ. ನಾಳೆ ಭಾನುವಾರ ರಾತ್ರಿ ದೊಡ್ಡಬಾತಿ ರೇವಣಸಿದ್ದೇಶ್ವರ ಸ್ವಾಮಿ ಮತ್ತು ಬೀರಲಿಂಗೇಶ್ವರ ಸ್ವಾಮಿಯ ಆಗಮನ, ವೀರಭದ್ರ ಸ್ವಾಮಿಗೆ ಹರಿದ್ರಾಲೇಪನ ಹಾಗೂ ತೇರುಮನೆ ಚೌಡೇಶ್ವರಿಗೆ ದೇವಸ್ಥಾನದ ವತಿಯಿಂದ ಉಡಿ ತುಂಬಲಾಗುವುದು.

error: Content is protected !!