8ನೇ ಶಾಖೆ ಆರಂಭೋತ್ಸವದಲ್ಲಿ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್

8ನೇ ಶಾಖೆ ಆರಂಭೋತ್ಸವದಲ್ಲಿ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್

ಇ. ಎಂ. ಮಂಜುನಾಥ

ಅವಿಭಜಿತ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರಪ್ರಥಮ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಾವಣಗೆರೆ ಅರ್ಬನ್ ಕೋ – ಆಪರೇಟಿವ್ ಬ್ಯಾಂಕ್ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ಗಳಲ್ಲೊಂದಾಗಿದ್ದು, ತಾನು ಹೊಂದಿರುವ ಪ್ರಧಾನ ಕಛೇರಿ ಸೇರಿದಂತೆ 7 ಶಾಖೆಗಳ ಜೊತೆಗೆ ಇದೀಗ 8ನೇ ಶಾಖೆಯನ್ನು ಕಾರ್ಯಾರಂಭ ಮಾಡುತ್ತಿದೆ.

ಸ್ಥಾಪನೆ : ಆರ್ಥಿಕ ಹಿತಾಸಕ್ತಿಗಳ ರಕ್ಷಣೆಗಾಗಿ ಸಮಾನತೆಯ ನೆಲೆ ಮತ್ತು ಸಹಕಾರದ ನಿಟ್ಟಿನಲ್ಲಿ ವರ್ತಕರು ಹಾಗೂ ಸಾಮಾಜಿಕ ಸೇವಾ ಮನೋಭಾವ ಹೊಂದಿದ್ದ ಮಹನೀಯರು ಒಟ್ಟಾಗಿ ಸೇರಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಶ್ರೀ ಕೆ. ಲಕ್ಷ್ಮಣರಾವ್ ಅವರ ಮಾರ್ಗದರ್ಶನ ಮತ್ತು ಸಹಕಾರಿ ಧುರೀಣರಾಗಿದ್ದ ಡಾ. ಎಸ್. ಕೊಟ್ರಬಸಪ್ಪ ಅವರ ನೇತೃತ್ವದಲ್ಲಿ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಸ್ಥಾಪನೆಗೊಂಡಿತ್ತು. 

ಈ ಬ್ಯಾಂಕ್ ಸ್ಥಾಪನೆ ಸಂಬಂಧ 1961, ನವೆಂಬರ್ 25ರಂದು ಪ್ರಾರಂಭಿಕ ಸಭೆ ನಡೆಯಿತಾದರೂ ಹಲವಾರು ಸಭೆಗಳ ನಂತರ ಅಧಿಕೃತವಾಗಿ 1962, ಫೆಬ್ರವರಿ 09ರಂದು ಅಂದಿನ ಹೆಸರಾಂತ ಕೈಗಾರಿಕೋದ್ಯಮಿಯಾಗಿದ್ದ ಧರ್ಮಪ್ರಕಾಶ ರಾಜನಹಳ್ಳಿ ಶ್ರೀ ರಾಮಶೆಟ್ಟರ ಅಮೃತ ಹಸ್ತದಿಂದ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಕಾರ್ಯಾರಂಭ ಮಾಡಿತು. ಆರಂಭದ ದಿನಗಳಲ್ಲಿ ನರಸರಾಜಪೇಟೆಯಲ್ಲಿದ್ದ ಲಿಂ. ಧರ್ಮಪ್ರವರ್ತ ಹನಗವಾಡಿ ಮಠದ ಮುರುಗೆಯ್ಯನವರ ಕಟ್ಟಡದಲ್ಲಿ ಬ್ಯಾಂಕ್ ತನ್ನ ಚಟುವಟಿಕೆ ಆರಂಭಿಸಿತು. ನಂತರದ ದಿನಗಳಲ್ಲಿ ತನ್ನದೇ ಆದ ಸ್ವಂತ ಕಟ್ಟಡವನ್ನು ಹೊಂದುವ ನಿಟ್ಟಿನಲ್ಲಿ ಪಿ.ಬಿ. ರಸ್ತೆಯ ಮಹಾತ್ಮ ಗಾಂಧಿ ವೃತ್ತದ ಬಳಿ ಸ್ಥಳಾಂತರಗೊಂಡಿತು. 

ಶಾಖೆಗಳು : ಪ್ರಗತಿಯ ಪಥದಲ್ಲಿ ಮುನ್ನಡೆದಂತೆ ಮತ್ತು ಜನರ ಹತ್ತಿರಕ್ಕೆ ಬ್ಯಾಂಕ್ ಅನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಹಾಗೂ ಗ್ರಾಹಕರಿಗೆ ಶೀಘ್ರ ಸೇವೆ ಸಲ್ಲಿಸುವ ಸದುದ್ದೇಶದಿಂದ 1976ರಲ್ಲಿ ಮೊದಲ ಬಾರಿಗೆ ಚೌಕಿಪೇಟೆಯಲ್ಲಿ ಶಾಖೆಯನ್ನು ಆರಂಭಿಸಲಾಯಿತು. ಜನಸಂಖ್ಯೆಗನುಗುಣವಾಗಿ ಬಡಾವಣೆಗಳು ಬೆಳೆದಂತೆ ಆಯಾ ಭಾಗಕ್ಕೆ ಶಾಖೆಗಳನ್ನು ಸ್ಥಾಪಿಸಲಾಯಿತು. ಈ ಹಿನ್ನೆಲೆಯಲ್ಲಿ ಚೌಕಿಪೇಟೆ, ಪಿ.ಜೆ. ಬಡಾವಣೆ, ನರಸರಾಜಪೇಟೆ, ಆಡಳಿತ ಕಛೇರಿ, ಶ್ರೀ ಡಿ. ದೇವರಾಜ ಅರಸು ಬಡಾವಣೆ ಶಾಖೆಗಳು ರಚನೆಗೊಂಡವು. ಗ್ರಾಹಕರ ಒತ್ತಾಸೆಯ ಮೇರೆಗೆ ಹೊನ್ನಾಳಿಯಲ್ಲೂ ಶಾಖೆಯನ್ನು ಆರಂಭಿಸಲಾಯಿತು. ಈ ಎಲ್ಲಾ ಶಾಖೆಗಳು ಪ್ರಗತಿಯ ಮುಂಚೂಣಿಯಲ್ಲಿರುವುದು ಬ್ಯಾಂಕಿನ ಹಿರಿಮೆ. ಬಹುದಿನಗಳ ಗ್ರಾಹಕರ ಬೇಡಿಕೆಯಾಗಿದ್ದ ನಿಟುವಳ್ಳಿ ಶಾಖೆಯು ಸ್ವಂತ ಕಟ್ಟಡ ಮತ್ತು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಇಂದು ಕಾರ್ಯಾರಂಭ ಮಾಡುತ್ತಿರುವುದು ಬ್ಯಾಂಕಿನ ಪ್ರತಿಷ್ಠೆಯನ್ನು ಹೆಚ್ಚಿಸಿದೆ.

ಸರ್ವತೋಮುಖ ಅಭಿವೃದ್ಧಿಯಲ್ಲಿ ಅಧಿಕಾರಿಗಳು : ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಹಾಗೂ ಸಂಪೂರ್ಣ ಗಣಕೀಕೃತವನ್ನಾಗಿ ಸುವ ದಿಸೆಯಲ್ಲಿ ಬ್ಯಾಂಕಿನ ಹಿರಿಯ ಅಧಿಕಾರಿಗಳ ಸೇವೆ ಶ್ಲ್ಯಾಘನೀಯ.

ಈ ಪೈಕಿ ಬ್ಯಾಂಕಿನ ಸಂಸ್ಥಾಪಕ ಕಾರ್ಯದರ್ಶಿ ಎ.ಎಂ. ಪ್ರಭುದೇವ್, ನಿವೃತ್ತ ಪ್ರಧಾನ ವ್ಯವಸ್ಥಾಪಕರುಗಳಾದ ಎಂ.ಸಿ. ವಿಜಯಕುಮಾರ್, ಎಂ. ಬಸವರಾಜಯ್ಯ, ಎಸ್.ಎಂ. ಕೊಟ್ರಯ್ಯ, ಬಿ. ನಾಗರಾಜಪ್ಪ, ಉಮೇಶ್ ಎಸ್. ರೋಣದ್, ಡಿ.ವಿ. ಆರಾಧ್ಯಮಠ ಅವರುಗಳ ಕಾರ್ಯ ನಿರ್ವಹಣೆ ಸ್ಮರಣೀಯ.

ಹಿಂದಿನ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಹಾಲಿ ಪ್ರಧಾನ ವ್ಯವಸ್ಥಾಪಕ ಬಿ.ಎಸ್. ಮಲ್ಲೇಶ್, ಉಪ ಪ್ರಧಾನ ವ್ಯವಸ್ಥಾಪಕ ಆರ್.ಎ. ಪ್ರಸನ್ನ, ಗಣಕ ಯಂತ್ರ ವಿಭಾಗದ ಮುಖ್ಯಸ್ಥ ಬಿ.ಎಸ್. ಪ್ರಶಾಂತ್  ಅವರುಗಳಲ್ಲದೇ ಹಾಗೂ ಸಿಬ್ಬಂದಿ ವರ್ಗದವರು, ಲಕ್ಷ್ಮೀ ಠೇವಣಿ ಸಂಗ್ರಹಕಾರರು ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ಕಾರ್ಯ ನಿರ್ವಾಹಕ ಮಂಡಳಿಯ ಸೇವೆ ಮಾದರಿ : ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ತನ್ನ ಸುದೀರ್ಘ 63 ವರ್ಷಗಳ ಇತಿಹಾಸದಲ್ಲಿನ ಎಲ್ಲಾ ಆಡಳಿತ ಮಂಡಳಿಗಳ ಸದಸ್ಯರು ಬ್ಯಾಂಕಿನ ಅಭಿವೃದ್ಧಿಯಲ್ಲಿ ನಿರ್ವಹಿಸಿದ ಪಾತ್ರ ಮಾದರಿಯಾಗಿದ್ದು, ಪರಸ್ಪರ ಸೌಹಾರ್ದ, ಸಹಕಾರ ಮತ್ತು ಬದ್ಧತೆಯಿಂದಾಗಿ ಬ್ಯಾಂಕ್ ಪ್ರಗತಿಯ ಮುಂಚೂಣಿಯನ್ನು ಕಾಯ್ದುಕೊಳ್ಳಲಾಗಿದೆ.

ಬ್ಯಾಂಕಿನ ಹಾಲಿ ಅಧ್ಯಕ್ಷ ಬಿ.ಸಿ. ಉಮಾಪತಿ, ಉಪಾಧ್ಯಕ್ಷ ಟಿ.ಎಸ್. ಜಯರುದ್ರೇಶ್, ನಿರ್ದೇಶಕರುಗಳಾದ ಕೋಗುಂಡಿ ಬಕ್ಕೇಶಪ್ಪ, ಅಂದನೂರು ಮುಪ್ಪಣ್ಣ, ಪಲ್ಲಾಗಟ್ಟೆ ಶಿವಾನಂದಪ್ಪ, ಎಂ. ಚಂದ್ರಶೇಖರ್, ದೇವರಮನೆ ಶಿವಕುಮಾರ್, ಅಜ್ಜಂಪುರ ಶೆಟ್ರು ವಿಜಯಕುಮಾರ್, ಶ್ರೀಮತಿ ಸುರೇಖಾ ಎಂ. ಚಿಗಟೇರಿ, ಕಂಚಿಕೇರಿ ಮಹೇಶ್, ಇ.ಎಂ. ಮಂಜುನಾಥ, ವಿ. ವಿಕ್ರಂ, ಶ್ರೀಮತಿ ಎ.ಆರ್. ಅರ್ಚನಾ ಡಾ. ರುದ್ರಮುನಿ, ಹೆಚ್.ಎಂ. ರುದ್ರಮುನಿಸ್ವಾಮಿ, ಸೋಗಿ ಮುರುಗೇಶ್, ವೃತ್ತಿಪರ ನಿರ್ದೇಶಕ ರಾದ ಮುಂಡಾಸ್ ವೀರೇಂದ್ರ, ಮಲ್ಲಿಕಾರ್ಜುನ ಕಣವಿ ಅವರುಗಳು ಬ್ಯಾಂಕಿನ ಸ್ಥಾಪಕರು ಹೊಂದಿದ್ದ ಹಿತವನ್ನು ಗಮನದಲ್ಲಿರಿಸಿಕೊಂಡು ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ಪಣ ತೊಟ್ಟಿದ್ದಾರೆ.         

error: Content is protected !!