ವಿಕಲಚೇತನರ ಕಲ್ಯಾಣಕ್ಕಾಗಿ ಡಾ. ಸುರೇಶ್ ಹನಗವಾಡಿಗೆ ರಾಷ್ಟ್ರಪ್ರಶಸ್ತಿ

ವಿಕಲಚೇತನರ ಕಲ್ಯಾಣಕ್ಕಾಗಿ ಡಾ. ಸುರೇಶ್ ಹನಗವಾಡಿಗೆ ರಾಷ್ಟ್ರಪ್ರಶಸ್ತಿ

ದಾವಣಗೆರೆ, ಡಿ.4- ನಗರದ ಲ್ಲಿರುವ  ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಸಂಸ್ಥಾಪಕ ಡಾ. ಸುರೇಶ್ ಹನಗವಾಡಿ ಅವರು ಜೆ.ಜೆ.ಎಂ.ಮೆಡಿ ಕಲ್ ಕಾಲೇಜಿನ ಪೆಥಾಲಜಿ ವಿಭಾಗದ ಪ್ರಾಧ್ಯಾಪಕರಾಗಿದ್ದು, ಸ್ವತಃ ತಾವೇ ಹಿಮೊಫಿಲಿಯಾ ಬಾಧಿತರಾಗಿದ್ದಾರೆ. 

ಡಾ. ಸುರೇಶ್ ಹನಗವಾಡಿ ಅವರು, ಹಿಮೊಫಿಲಿಯಾ, ಥಲಸ್ಸೇಮಿಯಾ ಮತ್ತು ಇತರೆ ವಿರಳ ರಕ್ತ ರೋಗಗಳ ಬಗ್ಗೆ ಕಳೆದ 35 ವರ್ಷಗಳಿಂದ ಅಧ್ಯಯನ ಮಾಡಿ ದೇಶ್ಯಾದಂತ ಸಂಚರಿಸಿ ರೋಗಿಗಳ ಕಷ್ಟಕಾರ್ಪಣ್ಯ ಆಲಿಸಿ ದುಬಾರಿ ಚಿಕಿತ್ಸೆಯನ್ನು ಸರ್ಕಾರದಿಂದ ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತವಾಗಿ ಪೂರೈಕೆಯಾಗುವಂತೆ ಹೋರಾಟ ಮಾಡಿ ಯಶಸ್ಸು ಕಂಡಿದ್ದಾರೆ. 

ಭಾರತ ಸರ್ಕಾರವು ಈ ಅನನ್ಯ ಸೇವೆಯನ್ನು ಪರಿಗಣಿಸಿ 2024-25ನೇ ಸಾಲಿನ `ಶ್ರೇಷ್ಟ ದಿವ್ಯಾಂಗನ’ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ವಿಕಲಚೇತನರ ದಿನಾಚರಣೆಯಾದ ಡಿಸೆಂಬರ್ 3 ರಂದು ನವದೆಹಲಿಯಲ್ಲಿ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮ ಪ್ರಶಸ್ತಿ ನೀಡಿ ಪುರಸ್ಕರಿಸಿದರು.

ಕರ್ನಾಟಕ ಹಿಮೊಫಿಲಿಯಾ ಸೊಸೈಟಿಯ ಅಧ್ಯಕ್ಷ ಡಾ. ಸುರೇಶ್ ಹನಗವಾಡಿ ಅವರು, `ರಕ್ತದಲ್ಲಿ ಅಡಕವಾ ಗಿರುವ ಅಂಗವೈಕಲ್ಯ’ದ ಬಗ್ಗೆ ಜಾಗೃತಿ ಮೂಡಿಸಿದ್ದರಲ್ಲದೇ ವಿಕಲಚೇತನರ ಯೋಜನೆಗಳಿಗೆ ನೀತಿ ನಿಯಮಗಳನ್ನು ತರಲು ಸರ್ಕಾರದೊಂದಿಗೆ ಕೈ ಜೋಡಿಸಿದ್ದಾರೆ.

error: Content is protected !!