ರಾಣೇಬೆನ್ನೂರು, ಜು. 19 – ಇಲ್ಲಿನ ವರ್ತಕರ ಸಂಘ, ಇನ್ನರ್ ವ್ಹೀಲ್ ಹಾಗೂ ಗೋಗ್ರೀನ್ ಸಂಸ್ಥೆ ಸೇರಿ ನಗರ ಸೌಂದರ್ಯ ಹೆಚ್ಚಿಸಲು 5 ನೂರು ವಿವಿಧ ಬಣ್ಣಗಳ ಹೂವು ಬಿಡುವ ಹಾಗೂ ಇತರೆ ಅಲಂಕಾರಿಕ ಗಿಡಗಳು ಸೇರಿದಂತೆ ಒಟ್ಟು 1 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮ ಯೋಜಿಸಿದ್ದು , ಪ್ರಕಾಶಾನಂದ ಸ್ವಾಮಿಗಳು ಚಾಲನೆ ನೀಡಿದರು. ಸಂಜನ ಕುರವತ್ತಿ, ಸುಮಾ ಹೊಟ್ಟಿಗೌಡ್ರ, ಸುಮಾ ಉಪ್ಪಿನ, ಪ್ರತಿಭಾ ಜಂಬಗಿ, ಎಚ್.ಎನ್. ದೇವಕುಮಾರ, ಜಿ.ಜಿ. ಹೊಟ್ಟಿಗೌಡ್ರ, ಡಾ. ಬಸವರಾಜ ಕೇಲಗಾರ, ಡಾ. ಗಿರೀಶ ಕೆಂಚಪ್ಪನವರ, ವೀರೇಶ ಮೋಟಗಿ, ಬಸವಪ್ರಭು ಪಾಟೀಲ ಮತ್ತಿತರರಿದ್ದರು.
ನಗರದಾದ್ಯಂತ ಅಲಂಕಾರಿಕ ಗಿಡ ನೆಡುವ ಗೋ ಗ್ರೀನ್
