ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಇದೇ ದಿನಾಂಕ 14 ಮತ್ತು 15 ರಂದು ಜರುಗಲಿರುವ ಸಂತ ಸೇವಾಲಾಲ್ ಮಹಾರಾಜರ ಜಯಂತೋತ್ಸವಕ್ಕೆ ಹರಪನಹಳ್ಳಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ಭಕ್ತರು ತಂಡ ತಂಡವಾಗಿ ಸುಡು ಬಿಸಿಲನ್ನು
ಲೆಕ್ಕಿಸದೇ ಬರಿಗಾಲಿನಿಂದ ಪಾದಯಾತ್ರೆ ಮೂಲಕ ಭಾನುವಾರ ಮಲೇಬೆನ್ನೂರು ಬಳಿ ಸಾಗಿದರು. ಪಾದಯಾತ್ರಿಗಳಿಗೆ ಕೊಮಾರನಹಳ್ಳಿ ದೇವಸ್ಥಾನದಲ್ಲಿ ಊಟ ಹಾಗೂ ವಸತಿಗೆ ವ್ಯವಸ್ಥೆ ಮಾಡಲಾಗಿದೆ.
January 25, 2025