ಆನಗೋಡು : ಕೃಷಿ ಹೊಂಡ ನಿರ್ಮಾಣಕ್ಕೆ ಶಾಸಕ ಬಸವಂತಪ್ಪ ಗುದ್ದಲಿ ಪೂಜೆ

ಆನಗೋಡು : ಕೃಷಿ ಹೊಂಡ ನಿರ್ಮಾಣಕ್ಕೆ ಶಾಸಕ ಬಸವಂತಪ್ಪ ಗುದ್ದಲಿ ಪೂಜೆ

ದಾವಣಗೆರೆ, ಫೆ.6-  ದಾವಣಗೆರೆ ತಾಲ್ಲೂಕು ಆನಗೋಡು ಗ್ರಾಮದಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಫಲಾನುಭವಿ ರೈತರಾದ ವಿಶ್ವವಿಜೇತ ಇವರ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಮಾಯಕೊಂಡ ಶಾಸಕ ಕೆ.ಎಸ್ ಬಸವಂತಪ್ಪ ಗುದ್ದಲಿ ಪೂಜೆ ನೆರವೇರಿಸಿದರು.

ಸರ್ಕಾರವು ಮಳೆ ಬರದ ವೇಳೆ ನೀರನ್ನು ಸಂಗ್ರಹಿಸಿ  ಬೆಳೆ ಸಂರಕ್ಷಣೆ ಮಾಡಲು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ. ರೈತರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡ, ಬದು ನಿರ್ಮಾಣ, ಕೃಷಿ ಹೊಂಡಗಳಿಗೆ ಪಾಲಿಥಿನ್ ಹೊದಿಕೆ ಮತ್ತು ತಂತಿ ಬೇಲಿ, ತುಂತುರು ನೀರಾವರಿ ಘಟಕ ಹಾಗೂ ಡೀಸೆಲ್ ಪಂಪ್‍ಸೆಟ್ ಗಳನ್ನು ಸಹಾಯಧನದಡಿಯಲ್ಲಿ ಅಳವಡಿಸಿಕೊಳ್ಳಲು ಅವಕಾಶವಿದೆ. ಎಲ್ಲಾ ರೈತರು ಕೃಷಿ ಭಾಗ್ಯ ಯೋಜನೆ ಸೌಲಭ್ಯ ಪಡೆದು ಲಾಭದಾಯಕ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಅವರು ರೈತರಿಗೆ ತಿಳಿಸಿದರು.

ಕೃಷಿ  ಸಹಾಯಕ ನಿರ್ದೇಶಕ
ಡಿ.ಎಂ. ಶ್ರೀಧರಮೂರ್ತಿ ಮಾತನಾಡಿ, ಕೃಷಿ ಭಾಗ್ಯ ಯೋಜನೆಯಡಿ ಮಾರ್ಗಸೂಚಿಯನ್ವಯ 6 ಘಟಕಗಳನ್ನು ರೈತರು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಈ ಯೋಜನೆ ಪಡೆಯಬಹುದಾಗಿದೆ ಎಂದರು

ಕೃಷಿ ಅಧಿಕಾರಿ ಆರ್. ಶ್ರೀನಿವಾಸ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಮ್ಮ, ಪಂಚಾಯಿತಿ ಸದಸ್ಯರಾದ ಬಸವರಾಜಪ್ಪ, ಎಸ್.ಬಿ. ಯೋಗೇಶಪ್ಪ, ಹುಣಿಹಳ್ಳಿ ಚಂದ್ರಪ್ಪ, ಆರ್.ವಿ. ತೇಜವರ್ಧನ್, ಕರಿಬಸಪ್ಪ, ಕಲ್ಲೇಶ್, ಸುರೇಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!